ಕೊರೊನಾ ಬಗ್ಗೆ ಆಂತಕ ಬೇಡ

ದಾವಣಗೆರೆ, ನ.3-  ಕೋವಿಡ್ 19 ಸೋಂಕು ನೆಗಡಿಗೆ ಕಾರಣವಾಗುವ ಸೋಂಕಿನ ವರ್ಗಕ್ಕೆ ಸೇರಿದ್ದು, ಇದಕ್ಕೆ ಶಾಶ್ವತ ಲಸಿಕೆ ಕಂಡುಹಿಡಿಯುವುದು ಅಸಾಧ್ಯ. ಬಿಸಿ ನೀರು, ಕಷಾಯ ಕುಡಿಯುವ ಮೂಲಕ ಕೊರೊನಾ ರೋಗ ವಾಸಿ ಮಾಡಿಕೊಳ್ಳಬಹುದು ಎಂದು ಸಾಮಾಜಿಕ ಕಾರ್ಯಕರ್ತ ಡಾ.ಶ್ರೀಧರ ಉಡುಪ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ನೂರು ರೂಪಾಯಿ ವೆಚ್ಚದಲ್ಲಿ ವಾಸಿ ಮಾಡಿಕೊಳ್ಳುವ ಕಾಯಿಲೆಗೆ ಲಕ್ಷಾಂತರ ರೂ. ಹಣ ಖರ್ಚು ಮಾಡುವ ಅಗತ್ಯವಿಲ್ಲ ಎಂದರು.

ಪೀಡಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಿದರೆ ಬೇಗ ಗುಣಮುಖರಾಗುತ್ತಾರೆ. ಆಸ್ಪತ್ರೆ ವಾತಾವರಣದಲ್ಲಿ ರೋಗಿಯು ಇನ್ನಷ್ಟು ಹೆದರಲಿದ್ದು, ಇದರಿಂದ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಆತ್ಮವಿಶ್ವಾಸವಿದ್ದರೆ ಎಂತಹ ಕಾಯಿಲೆಯನ್ನಾದರೂ ಜಯಿಸಬಹುದು. ಆದ್ದರಿಂದ ಕೊರೊನಾ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಅವರು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವರಾಮ್, ಆದಿತ್ಯ, ಉದಯ್ ಉಪಸ್ಥಿತರಿದ್ದರು.

error: Content is protected !!