ಸೀಲ್‌ಡೌನ್ ಮಾಡಿ 4 ದಿನಗಳಾದರೂ ರೋಗಿ ನೋಡದ ವೈದ್ಯರು

ದಾವಣಗೆರೆ, ಜು.30- ನಗರದ ಬಸವರಾಜಪೇಟೆ ಹುಬ್ಬಳ್ಳಿ ಚೌಡಪ್ಪನ ಗಲ್ಲಿಯಲ್ಲಿ ವ್ಯಕ್ತಿಯೋರ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆಯೆಂದು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೆ, ರೋಗಿ ತಪಾಸಣೆಗೆ 4 ದಿನಗಳು ಕಳೆದರೂ ವೈದ್ಯರಾಗಲೀ, ನರ್ಸ್‌ಗಳಾಗಲೀ, ಆರೋಗ್ಯ ಇಲಾಖೆ ಯಾರೊಬ್ಬರೂ ಬಂದಿಲ್ಲ ಎಂದು ವಕೀಲರ ಸಂಘದ ಉಪಾಧ್ಯಕ್ಷ ಹೆಚ್.ದಿವಾಕರ್ ದೂರಿದ್ದಾರೆ.

ಉಸ್ತುವಾರಿ ಹೊತ್ತ ಅಧಿಕಾರಿ ಕೊರೊನಾ ಬಂದ ವ್ಯಕ್ತಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಸೂಕ್ತ ಕಾಳಜಿ ವಹಿಸಬೇಕು ಎಂದು ಬಿಜೆಪಿ ಮುಖಂಡರಾದ ಹೆಚ್.ದಿವಾಕರ್, ಎ.ಸಿ.ರಾಘವೇಂದ್ರ, ಎ.ಎಸ್.ಮಂಜುನಾಥ್ ಆಗ್ರಹಿಸಿದ್ದಾರೆ.

error: Content is protected !!