ಕಾಗಿನೆಲೆ ಕನಕ ಗುರುಪೀಠಗಳಲ್ಲಿ ಭಕ್ತರ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ

ಕಾಗಿನೆಲೆ ಕನಕ ಗುರುಪೀಠಗಳಲ್ಲಿ ಭಕ್ತರ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ - Janathavaniಹಾವೇರಿ, ಜು.10- ಹೆಮ್ಮಾರಿ ಕೊರೊನಾ ವೈರಸ್ ದಿನೇ ದಿನೇ ಎಲ್ಲಾ ಕಡೆ ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಾಗಿನೆಲೆ ಕನಕ ಗುರು ಪೀಠಗಳಿಗೆ ತಾತ್ಕಾಲಿಕವಾಗಿ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ತಿಳಿಸಿದ್ದಾರೆ. ಕಾಗಿನೆಲೆಯಲ್ಲಿರುವ ಕನಕ ಗುರುಪೀಠ, ದೇವಸ್ಥಾನಗಳಲ್ಲಿ ಮತ್ತು ಮೈಲಾರ ಹಾಗೂ ಬೆಳ್ಳೂಡಿ ಶಾಖಾ ಮಠಗಳಲ್ಲಿ ದರ್ಶನಾಶೀರ್ವಾದವನ್ನು ನಿಷೇಧಿಸಿರುವ ಕಾರಣ ಭಕ್ತರು ಮುಂದಿನ ಪ್ರಕಟಣೆವರೆಗೂ ಸಹಕರಿಸಬೇಕೆಂದು ಶ್ರೀಗಳು ಮನವಿ ಮಾಡಿದ್ದಾರೆ.

error: Content is protected !!