ಜನನಿ ಫೌಂಡೇಷನ್‌ನಿಂದ ಹುತಾತ್ಮರಿಗೆ ಭಾವಪೂರ್ಣ ನಮನ

ದಾವಣಗೆರೆ, ಜೂ. 24- ಲಡಾಕ್ ಗಡಿಯಲ್ಲಿ ಕುತಂತ್ರಿ ಚೀನಾ ಸೈನಿಕರ ವಿರುದ್ಧ ಹೋರಾಡಿ ಹುತಾತ್ಮರಾದ ವೀರ ಯೋಧರಿಗೆ ಜನನಿ ಫೌಂಡೇಷನ್‌ ವತಿಯಿಂದ ಮೊಂಬತ್ತಿ ಬೆಳಗುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ವರ್ತುಲ ರಸ್ತೆಯ ಶಾರದಾಂಬ ದೇವಸ್ಥಾನದ ಬಳಿ ಸೇರಿದ ಸದಸ್ಯರು ಸಾಮಾಜಿಕ ಅಂತರ ಕಾಯ್ದುಕೊಂಡು ನಮನ ಸಲ್ಲಿಸಿದರು. ಫೌಂಡೇಷನ್‌ನ ಅಧ್ಯಕ್ಷ ಶಿವಪ್ರಸಾದ್ ಕುರುಡಿಮಠ್, ಉಪಾಧ್ಯಕ್ಷ ಮಣಿಕಂಠ, ಕಾರ್ಯದರ್ಶಿ ಮನೋಹರ್, ರಾಕೇಶ್, ಕೆ.ಆರ್. ಮಲ್ಲಿಕಾರ್ಜುನ್,
ಕಿರಣ್, ಪ್ರವೀಣ್, ಶಿವಕುಮಾರ್, ವಿಜಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!