ಆಧಾರ್ ತೋರಿಸಿ ಸೇವೆ ಪಡೆಯಲು ಕರೆ

ದಾವಣಗೆರೆ, ಜೂ.22- ಕೋವಿಡ್-19 ಒಂದು ಸಾಂಕ್ರಾಮಿಕ ಪಿಡುಗಾಗಿದ್ದು, ಈ ವೈರಸ್ ಬಯೋಮೆಟ್ರಿಕ್ ಉಪಕರಣಗಳು ಸೇರಿದಂತೆ ಮೇಲ್ಮೈಗಳ ಮೂಲಕ ಹರಡುವುದರಿಂದ ಎಬಿ-ಎಆರ್‌ಕೆ ಕಾರ್ಡ್‌ಗಳ (ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ) ವಿತರಣೆಯನ್ನು ನಿಲ್ಲಿಸಲಾಗಿದ್ದು, ಎಬಿ-ಎಆರ್‌ಕೆ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದಲ್ಲಿ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗಳನ್ನು ತೋರಿಸಿ, ಆರೋಗ್ಯ ಸೇವೆಗಳನ್ನು ಪಡೆಯಬಹುದೆಂದು ತಿಳಿಸಿದೆ.

error: Content is protected !!