ಮೇಲ್ಮನೆಗೆ ಮಗ, ತಮ್ಮನೂ ಆಕಾಂಕ್ಷಿ

ಮೇಲ್ಮನೆಗೆ ಮಗ, ತಮ್ಮನೂ ಆಕಾಂಕ್ಷಿ - Janathavani

ದಾವಣಗೆರೆ, ಜೂ. 22 – ಮೇಲ್ಮನೆಯ ಸದಸ್ಯರಾಗಲು ಸಾಕಷ್ಟು ಜನರು ಆಕಾಂಕ್ಷೆ ಹೊಂದುವುದು ಸಹಜವೇ ಆಗಿದೆ ಎಂದಿರುವ ಸಂಸದ ಜಿ.ಎಂ. ಸಿದ್ದೇಶ್ವರ, ಈ ಬಗ್ಗೆ ಕೋರ್ ಕಮಿಟಿ ಹಾಗೂ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರುವುದಾಗಿ ಹೇಳಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ವಿಧಾನ ಪರಿಷತ್ತಿಗೆ ಚುನಾವಣೆ ನಡೆಯುತ್ತಿದೆ ಹಾಗೂ ನಾಮಕರಣ ಸದಸ್ಯರನ್ನೂ ನೇಮಕ ಮಾಡಬೇಕಿದೆ. ಹೀಗಾಗಿ ಪಕ್ಷದಲ್ಲಿ ಹಲವಾರು ಜನರು ಟಿಕೆಟ್‌ಗೆ ಸಹಜವಾಗಿಯೇ ಆಕಾಂಕ್ಷಿಗಳಾಗಿದ್ದಾರೆ ಎಂದರು.

ಜಿಲ್ಲೆಯಿಂದ ಯಶವಂತರಾವ್ ಜಾಧವ್ ಹಾಗೂ ಜಯಪ್ರಕಾಶ್ ಅಂಬರ್‌ಕರ್ ಅವರು ಆಕಾಂಕ್ಷಿಗಳಾಗಿದ್ದಾರೆ. ಈ ಇಬ್ಬರಿಗೆ ಟಿಕೆಟ್ ಕೊಡಬೇಕೆಂದು ಕೇಳಿದ್ದೇವೆ. ಯಾರಿಗೆ ಕೊಟ್ಟರೂ ಸಂತೋಷ. ಕೊಡದೇ ಇದ್ದರೂ ಸಮಾಧಾನ. ಕೋರ್ ಕಮಿಟಿ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದರು.

ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಟಿಕೆಟ್‌ಗಾಗಿ ಒತ್ತಾಯ ಇದ್ದೇ ಇರುತ್ತದೆ. ನಮ್ಮ ಮನೆಯಲ್ಲೇ ಇಬ್ಬರು ಟಿಕೆಟ್ ಕೇಳ್ತಿದ್ದಾರೆ. ನನ್ನ ತಮ್ಮ ಲಿಂಗರಾಜು ಹಾಗೂ ಮಗ ಟಿಕೆಟ್ ಕೇಳ್ತಿದ್ದಾರೆ ಎಂದೂ ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಪದವೀಧರರ ಕ್ಷೇತ್ರಕ್ಕೆ ಚುನಾವಣೆ ಪ್ರಕಟವಾದರೆ 22 ಕೆರೆಗಳ ಹೋರಾಟ ಸಮಿತಿಯ ಅಧ್ಯಕ್ಷರಾದ ಡಾ. ಮಂಜುನಾಥ ಗೌಡ ಅವರೂ ಆಕಾಂಕ್ಷಿಯಾಗಲಿದ್ದಾರೆ ಎಂದು ಪಕ್ಕದಲ್ಲೇ ಇದ್ದ ಗೌಡರನ್ನು ನೋಡುತ್ತಾ ಸಿದ್ದೇಶ್ವರ್ ಹೇಳಿದರು.

 

error: Content is protected !!