90ನೇ ವರ್ಷದ ಸಂಭ್ರಮದಲ್ಲಿ ಎಸ್ಸೆಸ್ ಆಶಯ
ದಾವಣಗೆರೆ, ಜೂ.13- ನಾಡಿದ್ದು ದಿನಾಂಕ 16ರಂದು ತಮ್ಮ ಜನ್ಮದಿನದ ಶುಭ ಸಂದರ್ಭದಲ್ಲಿ ಎಲ್ಲರ ಹಾರೈಕೆ ಮತ್ತು ದೇವರ ಆಶೀರ್ವಾದದಿಂದ ತಾವು ಆರೋಗ್ಯವಾಗಿರು ವುದಾಗಿ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಹಾರೈಕೆ ಮತ್ತು ಶುಭಾಶಯಗಳು ಸದಾ ತಮ್ಮ ಜೊತೆ ಇದ್ದೇ ಇರುತ್ತವೆ. ಈ ಹಾರೈಕೆ ಯಿಂದಾಗಿಯೇ ತಾವು ಜನಸೇವೆ ಮಾಡುವ ಭಾಗ್ಯ ಪಡೆದಿದ್ದೇನೆ ಎಂದು ಎಸ್ಸೆಸ್ ಹರ್ಷಿಸಿದ್ದಾರೆ. `ನನ್ನ ಜನ್ಮದಿನದಂದು ಶುಭಾಶಯ ಹೇಳಲು ಗುಂಪು – ಗುಂಪಾಗಿ ಬರದೇ ನೀವು ಇದ್ದಲ್ಲಿಂದಲೇ ನನ್ನನ್ನು ಹಾರೈಸಿ. ಸಾಮಾಜಿಕ ಅಂತರ ಕಾಪಾಡುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಿದ್ದು, ಅದನ್ನು ಎಲ್ಲರೂ ಸೇರಿ ಪಾಲಿಸೋಣ. ಹಾರ – ತುರಾಯಿಗಳಿಗಿಂತ ನಿಮ್ಮ ಹೃದ ಯಾಳದ ಹಾರೈಕೆ ಅಮೂಲ್ಯ’ ಎಂದು ಎಸ್ಸೆಸ್ ಆಶಯ ವ್ಯಕ್ತಪಡಿಸಿದ್ದಾರೆ.