ಸೀಲ್ ಡೌನ್ ಪ್ರದೇಶದಲ್ಲೇ ಮನೆಗೆ ಕನ್ನ

ದಾವಣಗೆರೆ, ಜೂ.10- ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸೀಲ್ ಡೌನ್ ಪ್ರದೇಶದಲ್ಲೇ ಮನೆಗೆ ಕನ್ನ ಹಾಕಿರುವ ಕಳ್ಳರು, ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು 56 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಮಾಂ ನಗರದ ಬಿಡಿಓ ಆಫೀಸ್ ಕ್ವಾರ್ಟಸ್ ನಲ್ಲಿ ನಡೆದಿದೆ.

ಇಮಾಂ ನಗರವನ್ನು ಕಂಟೈನ್ ಮೆಂಟ್ ಜೋನ್ ನಲ್ಲಿ ಸೀಲ್ಡ್ ಮಾಡಿದ್ದರಿಂದ ಕೃಷಿಕ ಅರುಣ್ ಕುಮಾರ್ ಮತ್ತು ಬಿಡಿಓ ಕಚೇರಿಯ ಡಿ ದರ್ಜೆ ನೌಕರರಾದ ಅವರ ತಾಯಿ ಹೂವಮ್ಮ ಇಬ್ಬರೂ ಸಹ  ವಿನೋಬ ನಗರದಲ್ಲಿನ ಚಿಕ್ಕಪ್ಪನ ಮನೆಯಲ್ಲಿ ವಾಸವಿದ್ದರು. ನಿನ್ನೆ ತಮ್ಮ ಮನೆಗೆ ಬಂದು ಮನೆ ಸ್ವಚ್ಚಗೊಳಿಸಿ ನಂತರ ರಾತ್ರಿ ಮನೆಗೆ ಬೀಗ ಹಾಕಿಕೊಂಡು ಪುನಃ ಚಿಕ್ಕಪ್ಪನ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದೆ.

error: Content is protected !!