ದಾವಣಗೆರೆ, ಜೂ. 8- ಭಾರತೀಯ ರೈತರ ಪರವಾಗಿ, ದೇಶದ ಹಿತದೃಷ್ಟಿಯಿಂದ ಕಾರ್ಯ ಕ್ರಮಗಳನ್ನು ಯಶಸ್ವಿ ಗೊಳಿಸುವಲ್ಲಿ ಎಲ್ಲಾ ರಂಗಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ಇಡೀ ದೇಶವನ್ನೇ ವಿದೇಶಿಯರಿಗೆ ಅಡ ಇಡುವ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿಯವರು ತಮ್ಮ ಪದವಿಯಿಂದ ಕೆಳಗಿಳಿಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಇಂದಿಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ದೇಶವನ್ನು ಪರಕೀಯ ವಿದೇಶಿ ಕಂಪೆನಿಗಳಿಗೆ ಕೊಟ್ಟು ಹಣ ಹೆಕ್ಕುವಂತಹ ಕೆಲಸ ಮಾಡಲಾಗುತ್ತಿದೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಯಲ್ಲಿ ಕಾರ್ಪೊರೇಟ್ ಮತ್ತು ಎನ್ಎಂಸಿ ಕಂಪೆನಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದರು. ನಂತರ ಕೃಷಿ ಮಾರುಕಟ್ಟೆಯನ್ನು ಪ್ರವೇಶಿಸಲು ಎಪಿಎಂಸಿ ಕಾಯ್ದೆ ಕಾಲಂ 8ನ್ನು ಬದಲಾಯಿಸಿ, ಕಂಪನಿಗಳಿಗೆ ಎಪಿಎಂಸಿ ಕಾಯ್ದೆ, ಕಾನೂನು ಪಾಲನೆ ಮಾಡುವ ಅವಶ್ಯಕತೆ ಇಲ್ಲದ ರೀತಿ ಖಾಸಗಿ ಮಾರುಕಟ್ಟೆ ಹೊಂದಲು ಅವಕಾಶ ಮಾಡಿಕೊಟ್ಟಿದ್ದಾರೆ. ಆ ಮೂಲಕ ರೈತರದ್ದೇ ಸಂಸ್ಥೆಯಾದ ಎಪಿಎಂಸಿಯನ್ನು ಸಂಪೂರ್ಣ ಬಾಗಿಲು ಮುಚ್ಚಿ ಕಂಪನಿಗಳಿಗೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಇನ್ನು ಗ್ರಾಹಕರ ಮಾರುಕಟ್ಟೆ ನಗರ, ಮಹಾನಗರಗಳಲ್ಲಿನ ಮಾರು ಕಟ್ಟೆಯನ್ನು ಆಧುನಿಕ ಮಾರುಕಟ್ಟೆ ಎಂಬ ಹೆಸರಿನಲ್ಲಿ ಮಹಲ್ ಸಂಸ್ಕೃತಿಯನ್ನು ತೆರೆಯುವ ಮೂಲಕ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸಕ್ಕೆ ಕಂಪನಿಗಳಿಗೆ ಅವಕಾಶ ನೀಡಲಾಗಿದೆ ಎಂದು ಆಕ್ಷೇಪಿಸಿದರು.
2ನೇ ಸ್ವಾತಂತ್ರ್ಯ ಚಳವಳಿ ಘೋಷಣೆ
ದಾವಣಗೆರೆ, ಜೂ.8-ಕೊರೊನಾ ನೆಪವೊಡ್ಡಿ ದೇಶದ ಎಲ್ಲಾ ಪ್ರಮುಖ ಕ್ಷೇತ್ರಗಳ ಜೊತೆಗೆ ಸರ್ವಾಂಗವನ್ನೇ ಪರಕೀಯ ವಿದೇಶಿ ಬಂಡವಾಳ ಕಂಪನಿಗಳ ಕೈ ವಶ ಮಾಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಸಮಿತಿ ಸಭೆಯಲ್ಲಿ ಸರ್ಕಾರದ ಈ ನಿರ್ಧಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಚಳವಳಿ ನಡೆಸಲು ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.
ಈ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗ ಳಿಂದ ನೂರಾರು ಸಂಖ್ಯೆಯಲ್ಲಿ ರೈತ ಮುಖಂ ಡರು ಭಾಗವಹಿಸಿ ಸಭೆಯ ನಿರ್ಧಾರವನ್ನು ಒಕ್ಕೊರಲಿನಿಂದ ಸ್ವಾಗತಿಸಿದರು.
ದೇಶದ ಪ್ರಮುಖ ಅಂಗಾಂಗಗಳಲ್ಲಿ ಕೇಂದ್ರ ಸರ್ಕಾರ ವಿದೇಶಿಯರ ಬಂಡವಾಳಕ್ಕೆ ಅನುವು ಮಾಡಿಕೊಡುವಂತಹ ಕೆಲಸವನ್ನು ಘೋಷಣೆ ಮಾಡಿದೆ. ಕೊರೊನಾ ಮುಂದಿಟ್ಟು ಕೊಂಡು ಕೃಷಿ, ರಕ್ಷಣೆ, ಭದ್ರತೆ, ಕೈಗಾರಿಕೆ, ಅಂತರಿಕ್ಷದಲ್ಲಿ ಕೇಂದ್ರ ಸರ್ಕಾರ ವಿದೇಶಿ ಬಂಡವಾಳಕ್ಕೆ ಮುಕ್ತಗೊಳಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದ್ದು, ಇದು ದೇಶದ ಸ್ವಾತಂತ್ರ್ಯ ಹರಣ ಮಾಡುತ್ತಿದೆ. ಅಲ್ಲದೇ ದೇಶದ ಆರ್ಥಿಕತೆಯನ್ನು ವಿದೇಶಿ ಕಂಪೆನಿಗಳ ಕೈಗೆ ಧಾರೆ ಎರೆಯುತ್ತಿದೆ. ಇದು ಅಪಾಯಕಾರಿ ಸಂಗತಿ ಎಂದು ಸಭೆಯಲ್ಲಿ ಚರ್ಚೆ ನಡೆದು, ಅದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು.
ಸಭೆಯಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಮುಖಂಡರು ಗಳಾದ ಈಚಘಟ್ಟ ಸಿದ್ದವೀರಪ್ಪ, ಹೊನ್ನೂರು ಮುನಿಯಪ್ಪ, ಚಿಕ್ಕನಹಳ್ಳಿ ಮಲ್ಲೇಶಣ್ಣ, ತೆಲಗಿ ಸುರೇಶಪ್ಪ, ಹಾಳೂರು ನಾಗರಾಜ್, ಶಿವಾನಂದಪ್ಪ ಹೊನ್ನಾಳಿ, ಬಸವರಾಜಪ್ಪ, ಕುರುವ ಗಣೇಶ, ಶಿವಪ್ಪ ಕೋಲಾರ, ಶಿವಮೊಗ್ಗ ಮಂಜುನಾಥ್ ಗೌಡ್ರು, ರಾಜು, ಕೊಪ್ಪಳ ಹೊಳೆಯಾಚೆ ಹನುಮಂತಪ್ಪ, ಬತ್ತಳ್ಳಿ ಭೋರೇಗೌಡ, ಮಾಲತೇಶ್ ಹಾವೇರಿ, ಕಾರ್ತಿಕ್ ಸೇರಿದಂತೆ ಇತರರು ಇದ್ದರು.
ವಿದ್ಯುತ್ ಶಕ್ತಿ ಉತ್ಪಾದನೆ ಮತ್ತು ವಿತರಣೆ, ಬಂದರು ನಿರ್ವಹಣೆ ಜವಾಬ್ದಾರಿ, ವಿಮಾನ ನಿಲ್ದಾಣ ನಿರ್ವಹಣೆ, ರಕ್ಷಣಾ ಇಲಾಖೆ ಯುದ್ಧ ಸಾಮಗ್ರಿಗಳ ಉತ್ಪಾದನೆ, ಅಂತರಿಕ್ಷ ಉಡಾವಣೆ, ಬಾಹ್ಯಾಕಾಶ ಸಂಶೋಧನೆ ಕಾರ್ಯಕ್ಷೇತ್ರ ಹೀಗೆ ದೇಶದ ಸರ್ವಾಂಗವನ್ನೇ ಕೊರೊನಾ ನೆಪವೊಡ್ಡಿ ಸಂಪೂರ್ಣ ವಿದೇಶಿ ಬಂಡವಾಳ, ಕಾರ್ಪೊರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಖಾಸಗೀಕರಣಕ್ಕೆ ಅವಕಾಶ ನೀಡಲಾಗುತ್ತಿದೆ. ಆ ಮುಖೇನ ದೇಶದ ಸ್ವಾತಂತ್ರ್ಯ ನಾಶದ ಜೊತೆಗೆ ದೇಶದ ಆರ್ಥಿಕತೆಯನ್ನೇ ವಿದೇಶಿ ಕಂಪನಿ ಕೈಗೆ ಧಾರೆ ಎರೆಯುವ ಅಪಾಯಕಾರಿ ತೀರ್ಮಾನಕ್ಕೆ ಕೇಂದ್ರ ಸರ್ಕಾರ ಬಂದಿದೆ ಎಂದು ಅಸಮಾಧಾನಗೊಂಡರು.
ಕೊರೊನಾ ಸಂದರ್ಭದಲ್ಲಿ ರೈತರನ್ನು ಕಾಪಾಡಿಲ್ಲ. ಎಲ್ಲ ನಗರ ಪ್ರದೇಶಗಳಲ್ಲಿ ಇದ್ದಂತಹ ಕೂಲಿ ಕಾರ್ಮಿಕರಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಯಾರೋ ದೆಹಲಿಯಿಂದ ಅಹಮದಬಾದ್ನ ಲ್ಲಿರುವ ಕುಟುಂಬವನ್ನು ಕರೆದುಕೊಂಡು ಹೋ ಗಲು ವಿಮಾನ ಕೊಡ್ತೀರಾ. ಆದರೆ, ಸಾಮಾನ್ಯ ಜನ ಪ್ರಯಾಣ ಮಾಡಲು ರೈಲು ಸಕಾಲದಲ್ಲಿ ಸಂಚರಿಸುವಂತೆ ಮಾಡದೇ ಇಡೀ ದೇಶದಲ್ಲಿ ದುಡಿಯುವ ಜನರನ್ನು ಅಲೆಮಾರಿಗಳಂತೆ ಓಡಾ ಡಿಸಿದ್ದೀರ. ಇಂತಹ ಜನವಿರೋಧಿ ನಡವಳಿಕೆಗ ಳಿಗೆ ರೈತ ಸಂಘ ಖಂಡಿಸಲಿದೆ. ದೇಶವನ್ನು ವಿದೇ ಶಗಳಿಗೆ ಅಡ ಇಡುವ ಬದಲಿಗೆ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರೈತ ಸಂಘ ದೇಶದ ಎರಡನೇ ಸ್ವತಂತ್ರ ಚಳವಳಿಯ ಹೋ ರಾಟವನ್ನು ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.