ಕಾಂಗ್ರೆಸ್‌ನಿಂದ ಉಚ್ಛಾಟನೆ ನಿಯಮ ಬಾಹಿರ: ಮುಜಾಹಿದ್ ಪಾಷಾ

ದಾವಣಗೆರೆ, ಮಾ.24- ಕಾಂಗ್ರೆಸ್ ಪಕ್ಷದಿಂದ ನನ್ನನ್ನು ಉಚ್ಛಾಟಿಸಿ ರುವುದು ನಿಯಮ ಬಾಹಿರ ಎಂದು ಮಹಾನಗರ ಪಾಲಿಕೆ 22ನೇ ವಾರ್ಡ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಹಮ್ಮದ್ ಮುಜಾಹಿದ್ ಪಾಷ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮೇಯರ್ ಚುನಾವಣೆಯಲ್ಲಿ ವಿಪ್ ಜಾರಿ ಮಾಡಿದ್ದನ್ನು ಉಲ್ಲಂಘಿಸಿದ ಪಾಲಿಕೆ ಸದಸ್ಯರ ವಿರುದ್ಧವೇ ಕ್ರಮ ಕೈಗೊಳ್ಳದ ಕಾಂಗ್ರೆಸ್ ನಾಯಕರು ಸಾಮಾನ್ಯ ಕಾರ್ಯಕರ್ತನಾಗಿರುವ ನನ್ನನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ. 

ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಉಚ್ಛಾಟಿಸುವ ಅಧಿಕಾರ ಜಿಲ್ಲಾ ಕಾಂಗ್ರೆಸ್‌ಗೆ ಇರುವುದಿಲ್ಲ. ಆದರೆ ಉಚ್ಛಾಟನೆ ಮಾಡಲು ಶಿಫಾರಸ್ಸು ಮಾಡಬಹುದಷ್ಟೇ. ಹೀಗಾಗಿ ಉಚ್ಛಾಟನೆಯೇ ನಿಯಮ ಬಾಹಿರ ಎಂದರು. ಪತ್ರಿಕಾಗೋಷ್ಠಿಯಲ್ಲಿ ಓ.ಎಸ್. ಶಫಿ, ಅಸ್ಲಾಂ, ಇಸ್ಮಾಯಿಲ್, ಸದ್ದಾಂ, ಅನ್ಸರ್ ಉಪಸ್ಥಿತರಿದ್ದರು.

error: Content is protected !!