ತರಳಬಾಳು ಕೋವಿಡ್ ಕೇರ್ ಸೆಂಟರ್‌ನಲ್ಲಿ ಗುರು ನಮನ

ದಾವಣಗೆರೆ, ಜೂ.25 – ನಗರದ ತರಳಬಾಳು ಕೋವಿಡ್ ಸೆಂಟರ್‍ನಲ್ಲಿ ಕೊರೊನಾ ಸೋಂಕಿತರು ತರಳಬಾಳು ಸೇವಾ ಸಮಿತಿ ಸದಸ್ಯರನ್ನು ಕರೆಸಿ ತರಳಬಾಳು ಜಗದ್ಗುರುಗಳ ಕಾರ್ಯಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದರು. ಜಗದ್ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. 

ತರಳಬಾಳು  ಸೇವಾ ಸಮಿತಿ ಅಧ್ಯಕ್ಷ ಶಶಿಧರ್ ಹೆಮ್ಮನಬೇತೂರು ಮಾತನಾಡಿ, ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳವರು ತಮಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದರು. ಈಗಾಗಲೇ ತರಬಾಳು ಸೆಂಟರ್‌ನಲ್ಲಿ 406 ಜನ ಗುಣಮುಖರಾಗಿದ್ದು, ಅವರೆಲ್ಲರೂ ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಮೆಳ್ಳೇಕಟ್ಟೆ ಶ್ರೀನಿವಾಸ್ ಮಾತನಾಡಿ, ಇಲ್ಲಿವರೆಗೆ ಸಹಕರಿಸಿದ ದಾನಿಗಳಿಗೆ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. 

ಮಾಗನೂರು ಉಮೇಶ್ ಗೌಡ್ರು, ಪ್ರಭು ಕಾವಲಹಳ್ಳಿ, ಲಿಂಗರಾಜ್ ಅಗಸನಕಟ್ಟೆ, ಸತೀಶ್ ಸಿರಿಗೆರೆ, ಧನ್ಯಕುಮಾರ್ ಎಲೆಬೇತೂರು, ಕೋಟಿಗೆರೆ ಶಿವಕುಮಾರ್, ಪರಮೇಶ್ವರಪ್ಪ ಕಕ್ಕರಗೊಳ್ಳ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!