ಜಿಗಳಿ: 26ಕ್ಕೆ ರಂಗನಾಥ ಸ್ವಾಮಿ ರಥೋತ್ಸವ

ಜಿಗಳಿ: 26ಕ್ಕೆ ರಂಗನಾಥ ಸ್ವಾಮಿ ರಥೋತ್ಸವ - Janathavaniಮಲೇಬೆನ್ನೂರು, ಮಾ.23- ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 26 ಶುಕ್ರವಾರ ತಡರಾತ್ರಿ ಜರುಗಲಿದೆ.

ರಥೋತ್ಸವದ ಅಂಗವಾಗಿ 25 ರ ಗುರುವಾರ ರಾತ್ರಿ 8.30ಕ್ಕೆ ಮಹಾರಥಕ್ಕೆ ಕಳಸಧಾರಣೆ ಮಾಡಲಾಗುವುದು. ಮಾ.26 ರ ಶುಕ್ರವಾರ ಬೆಳಿಗ್ಗೆ  8 ಗಂಟೆಗೆ ಗಜ ಉತ್ಸವ ನಡೆಯಲಿದ್ದು, ಸಂಜೆ 4 ಗಂಟೆಯಿಂದ ಶಸ್ತ್ರ ಕಾರ್ಯಕ್ರಮಗಳು ಜರುಗಲಿವೆ. ಇದೇ ದಿನ ತಡರಾತ್ರಿ (ಶನಿವಾರ ಬೆಳಗಿನ ಜಾವ) ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಯಲವಟ್ಟಿಯ ಶ್ರೀ ಆಂಜನೇಯ ಸ್ವಾಮಿ, ಜಿ. ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ಹಾಗೂ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವರ ಒಡಗೂಡಿ ಸಕಲ ಬಿರುದಾವಳಿಗಳೊಂದಿಗೆ ನಡೆಯಲಿದೆ.

27 ರ ಶನಿವಾರ ಬೆಳಿಗ್ಗೆ 10.30 ರಿಂದ ದೇವಸ್ಥಾನ ದಲ್ಲಿ ಜವಳ, ಮುದ್ರೆ ಇತ್ಯಾದಿ ಸೇವಾ ಕಾರ್ಯಕ್ರಮಗಳು ನಡೆಯುವವು. ಸಂಜೆ ಓಕಳಿ ನಂತರ ಕಂಕಣ ವಿಸರ್ಜನೆ ಮಾಡಲಾಗುವುದು.  28ರ ಭಾನುವಾರ ಬೆಳಿಗ್ಗೆ ವಿವಿಧ ಕಾರ್ಯಕ್ರಮಗಳ ನಂತರ ಸಂಜೆ 7.30 ಕ್ಕೆ ಶ್ರೀ ರಂಗನಾಥ ಸ್ವಾಮಿ ಸೇರಿದಂತೆ ಎಲ್ಲಾ ದೇವರುಗಳ ಸಮ್ಮುಖದಲ್ಲಿ ಭೂತನ ಸೇವೆ ಮತ್ತು ರಾಜ ಬೀದಿಗಳಲ್ಲಿ ದೇವರುಗಳ ಮೆರವಣಿಗೆ ನಡೆಯುವುದು.  30 ರ ಮಂಗಳವಾರ ಶ್ರೀ ಚೌಡಮ್ಮದೇವಿ ಹಬ್ಬ ನಡೆಯಲಿದೆ.

error: Content is protected !!