1,250 ಕೋಟಿ ರೂ. ಪ್ಯಾಕೇಜ್: ಅವೈಜ್ಞಾನಿಕ ನಿರ್ಧಾರ

1,250 ಕೋಟಿ ರೂ. ಪ್ಯಾಕೇಜ್: ಅವೈಜ್ಞಾನಿಕ ನಿರ್ಧಾರ - Janathavaniಹರಪನಹಳ್ಳಿ, ಮೇ 23-  ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯ ಸರ್ಕಾರದಿಂದ 1,250 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದು,  ಯಾರಿಗೆ ಸಾಲಲಿದೆ. ಅದೊಂದು ಅವೈಜ್ಞಾನಿಕ ನಿರ್ಧಾರ ವೆಂದು ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅಭಿಪ್ರಾಯ ಪಟ್ಟರು. ರಾಜ್ಯ ಸರ್ಕಾರದ ಘೋಷಿತ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಮತ್ತು ಬಿಜೆಪಿ ಸಚಿವರುಗಳಿಗೆ ಆಡಳಿತದ ಅನು ಭವ ಕಡಿಮೆ. ಸಿದ್ದರಾಮಯ್ಯನವರು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, 10 ಸಾವಿರ ಕೋಟಿ ರೂ. ಪ್ಯಾಕೇಜ್‍ಗೆ ಸಲಹೆ ನೀಡಿದ್ದಾರೆ. ಆದರೆ ಯಡಿಯೂರಪ್ಪ ಅವರು ಕೇವಲ 1,250 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿರುವಂತ ಹದ್ದು ಕೇವಲ ಕಣ್ಣೊರೆಸುವ ತಂತ್ರ ಎಂದು ಲತಾ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

error: Content is protected !!