ಬಾಂಬೆಗೆ ಹೊರಟಿದ್ದ ಆಂಧ್ರಪ್ರದೇಶದ ಬಾಲಕಿ ರಕ್ಷಣೆ

ದಾವಣಗೆರೆ, ಜು.29- ಬಾಂಬೆಗೆ ಹೊರಟಿದ್ದ ಆಂಧ್ರ ಪ್ರದೇಶ ಮೂಲದ ಬಾಲಕಿಯನ್ನು ಇಲ್ಲಿನ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ. 

ಕಳೆದ 5-6 ದಿನಗಳ ಹಿಂದೆ ಆಂಧ್ರ ಪ್ರದೇಶದ ಬಾಲಕಿಯು ಮನೆ ಬಿಟ್ಟು ಬೆಂಗಳೂರು ಕಡೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾಳೆ. ಹೀಗೆ ಬಂದ ಬಾಲಕಿ ನಂತರ ರೈಲಿನಲ್ಲಿ ಮುಂಬಯಿ ಕಡೆಗೆ ತೆರಳುತ್ತಿದ್ದಳು. ಈ ವಿಚಾರ ಆಂಧ್ರ ಪ್ರದೇಶದ ರೈಲ್ವೆ ಪೊಲೀಸರು ಬೆಂಗಳೂರಿಗೆ ವಿಚಾರ ತಿಳಿಸಿದ್ದಾರೆ. ಬೆಂಗಳೂರಿ ನಿಂದ ದಾವಣಗೆರೆ ರೈಲ್ವೆ ಪೊಲೀಸರಿಗೆ ಮಾಹಿತಿ ಬಂದ ಮೇಲೆ ಆ ಬಾಲಕಿಯನ್ನು ಇಲ್ಲಿ ರಕ್ಷಣೆ ಮಾಡಲಾಗಿದೆ. ಆಕೆಯ ಪೋಷಕರನ್ನು ಕರೆಸಿ, ಮನೆಗೆ ಕಳುಹಿಸ ಲಾಯಿತು ಎಂದು ರೈಲ್ವೆ ಪೊಲೀಸ್ ಇನ್ಸ್‍ಪೆಕ್ಟರ್ ಮುಸ್ತಾಕ್ ಅಹಮ್ಮದ್ ಡಿ. ಶೇಖ್ ತಿಳಿಸಿದ್ದಾರೆ.

error: Content is protected !!