ಅಂಗನವಾಡಿ ಸಹಾಯಕಿ ಹುದ್ದೆ ನೇಮಕಾತಿಯಲ್ಲಿ ಎಸ್ಸಿ ಮಹಿಳೆಗೆ ಅನ್ಯಾಯ

ದಾವಣಗೆರೆ, ಜು.22-  ಹರಿಹರ ತಾಲ್ಲೂಕು ಹನಗವಾಡಿ ಗ್ರಾಮ ಪಂಚಾ ಯತಿ ವ್ಯಾಪ್ತಿಗೆ ಬರುವ ಅಂಗನವಾಡಿ ಕೇಂದ್ರವನ್ನು ಪರಿಶಿಷ್ಟ ಜಾತಿ ಮೀಸಲಾತಿ ಬದಲಾಯಿಸಿ, ಸಾಮಾನ್ಯ ಮೀಸಲಾತಿ ಮಾಡುವ ಮೂಲಕ ಅನ್ಯಾಯ ಮಾಡ ಲಾಗಿದೆ ಎಂದು ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಬಿ. ಹನುಮಂತಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಗವಾಡಿಯ ವಾರ್ಡ್ ನಂ.1 ರಲ್ಲಿ ಇರುವ ಅಂಗನವಾಡಿ (ಡಿ ಕೇಂದ್ರ) ಕೇಂದ್ರದಲ್ಲಿ ಸಹಾಯಕಿಯಾಗಿ ಛಲವಾದಿ ಸಮಾಜದ ಮಹಿಳೆ ಎಂ.ಸಿ. ಸುಧಾ ಅವರು 2014 ರಿಂದ 31-07-2021 ರವರೆಗೂ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಕಳೆದ ಆರೇಳು ವರ್ಷಗಳಿಂದ ವೇತನವಿಲ್ಲದೇ ದುಡಿಸಿಕೊಳ್ಳಲಾಗಿದೆ ಎಂದು ದೂರಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಎಂ.ಸಿ. ಸುಧಾ, ಎ.ಹೆಚ್. ಮಂಜುನಾಥ್, ಆರ್. ಶ್ರೀನಿವಾಸ್ ಉಪಸ್ಥಿತರಿದ್ದರು.

error: Content is protected !!