ಕೊರತೆ : ವಿವಿಧ ರೈಲುಗಳು ರದ್ದು

ದಾವಣಗೆರೆ, ಮೇ 04- ಪ್ರಯಾಣಿಕರ ಕೊರತೆಯ ಕಾರಣಕ್ಕಾಗಿ ನೈರುತ್ಯ ರೈಲ್ವೆ ವಿಭಾಗವು ವಿವಿಧ ವಿಶೇಷ ರೈಲುಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಿದೆ. ಯಶವಂತಪುರ-ಬೀದರ್ (02671) ಮೇ 04 ರಿಂದ, ಬೀದರ್-ಯಶವಂತಪುರ (02672) ರೈಲು ಮೇ 05 ರಿಂದ ರದ್ದುಪಡಿಸಲಾಗಿದೆ.   

ಅದೇ ರೀತಿ ಯಶವಂತಪುರ-ಲಾತೂರ್ (06583) ಮೇ 05 ರಿಂದ, ಲಾತೂರ್-ಯಶವಂತಪುರ (06584) ಮೇ 06 ರಿಂದ,  ಬೆಂಗಳೂರು-ನಾಗರಕೊಯಿಲ್(07235) ಮೇ 05 ರಿಂದ, ನಾಗರಕೊಯಿಲ್-ಬೆಂಗ ಳೂರು (07236) ಮೇ 06 ರಿಂದ.  ಬೆಂಗಳೂರು-ಶಿವಮೊಗ್ಗ (020 89), ಶಿವಮೊಗ್ಗ-ಬೆಂಗಳೂರು (02090) ಮೇ 04 ರಿಂದ.  ಯಶವಂತ ಪುರ- ಕಣ್ಣೂರ್ (06537) ಮೇ 04 ರಿಂದ, ಕಣ್ಣೂರ್-ಯಶವಂತಪುರ್ (06538) ಮೇ 05 ರಿಂದ.  ಬೆಂಗಳೂರು-ಧಾರವಾಡ (07225) ಮೇ 04 ರಿಂದ, ಧಾರವಾಡ-ಬೆಂಗಳೂರು (07226) ಮೇ 05 ರಿಂದ ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

error: Content is protected !!