ಹೊಂಬಾಳೆಯಲ್ಲಿ ಗಣಪತಿ

ಹೊಂಬಾಳೆಯಲ್ಲಿ ಗಣಪತಿ - Janathavaniದಾವಣಗೆರೆ, ಮಾ.3 -ಪ್ರಕೃತಿಯಲ್ಲಿಯೇ ದೇವರನ್ನು ಕಾಣುವ ಪರಿಕಲ್ಪನೆ ನಮ್ಮದು.‌ ಇದಕ್ಕೆ ಸಾಕ್ಷಿ ನೀಡುವಂತೆ ಅಡಿಕೆ ಗಿಡದ ಹೊಂಬಾಳೆಯಲ್ಲಿ ವಿಘ್ನ ನಿವಾರಕ ಗಣಪನ ಆಕೃತಿ ಮೈ ದಾಳಿ ಅಚ್ಚರಿ ಮೂಡಿಸಿದೆ.

 ಹೊನ್ನಾಳಿ ತಾಲ್ಲೂಕಿನ ಮಲೇಬೆನ್ನೂರು ಸಮೀಪದ ಎರೇಹಳ್ಳಿಯ ರೈತ ತಿಮ್ಮಪ್ಪ ಅವರ ಪುತ್ರ ವೈ.ಜೆ. ಗಿರೀಶ್ ಅವರ ತೋಟದಲ್ಲಿ ಇತ್ತೀಚೆಗೆ ಈ ಪ್ರಾಕೃತಿಕ ವಿಸ್ಮಯ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮಹಿಳೆಯರು ಗಿರೀಶ್ ಅವರ ತೋಟಕ್ಕೆ ಹೋಗಿ ಭಯ ಭಕ್ತಿಯಿಂದ ಹೊಂಬಾಳೆ ಗಣಪನಿಗೆ  ಪೂಜೆ ಸಲ್ಲಿಸಿ ಪುನೀತ ಭಾವ ತಾಳಿದರು.

error: Content is protected !!