ಗೃಹಿಣಿಯ ಸರ ಅಪಹರಣ

ದಾವಣಗೆರೆ, ಮಾ.2- ಮುಂಜಾನೆ ವಾಯುವಿಹಾರ ಮಾಡುತ್ತಿದ್ದ ಗೃಹಿಣಿಯೋರ್ವರ 3 ಲಕ್ಷದ 20 ಸಾವಿರ ಮೌಲ್ಯದ ಎರಡು ಬಂಗಾರದ ಸರಗಳನ್ನು ಕಳ್ಳನೋರ್ವ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಸ್.ಎ. ರವಿಂದ್ರನಾಥ್ ಬಡಾವಣೆಯ ಡಿ.ಸಿ. ಗೀತಾ ತನ್ನ ಅಕ್ಕ ಸರೋಜಮ್ಮ ಜೊತೆಯಲ್ಲಿ ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಲೋಕಿಕೆರೆ ರಸ್ತೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಹತ್ತಿರ ಟಿವಿ ಸ್ಟೇಷನ್ ಮುಂಭಾಗದ ರಸ್ತೆಯಲ್ಲಿ ವಾಯು ವಿಹಾರ ಮಾಡುತ್ತಿದ್ದರು. ಗೃಹಿಣಿಯ 50 ಗ್ರಾಂ ತೂಕದ 2 ಲಕ್ಷ ಮೌಲ್ಯದ ಬಂಗಾರದ ಮಾಂಗಲ್ಯ ಸರ ಮತ್ತು 30 ಗ್ರಾಂ ತೂಕದ 1 ಲಕ್ಷದ 20 ಸಾವಿರ ಮೌಲ್ಯದ ಬಂಗಾರದ ಲಾಂಗ್ ಚೈನ್  ಕಿತ್ತುಕೊಂಡು ಪರಾರಿಯಾಗಿದ್ದಾನೆ.

error: Content is protected !!