ಉಕ್ಕಡಗಾತ್ರಿ : ಅಜ್ಜಯ್ಯನ ದರ್ಶನ ಸ್ಥಗಿತ

ಉಕ್ಕಡಗಾತ್ರಿ : ಅಜ್ಜಯ್ಯನ ದರ್ಶನ ಸ್ಥಗಿತ - Janathavaniಮಲೇಬೆನ್ನೂರು, ಏ.24- ಎಲ್ಲಾ ಕಡೆ ಕೊರೊನಾ  2ನೇ ಅಲೆ  ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರದ ಸೂಚನೆಯಂತೆ ಭಕ್ತರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಗದ್ದುಗೆ ದರ್ಶನವನ್ನು ಶನಿವಾರದಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ದೇವಸ್ಥಾನದಲ್ಲಿ ಗದ್ದುಗೆ ಪೂಜೆಗಳು ಎಂದಿನಂತೆ ನಡೆಯಲಿವೆ. ಆದರೆ, ಭಕ್ತರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿರುವ ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ಅವರು, ಹುಣ್ಣಿಮೆ ಕಾರ್ಯಕ್ರಮ ಹಾಗೂ ವಿಶೇಷ ಪೂಜೆ, ವಸತಿ ವ್ಯವಸ್ಥೆಯನ್ನು ಮುಂದಿನ ಆದೇಶದವರೆಗೂ ನಿಷೇಧಿಸಲಾಗಿದೆ.

ನಿಷೇಧ : ಕೊರೊನಾ ಹಿನ್ನೆಲೆಯಲ್ಲಿ ಹರಿಹರ ತಾಲ್ಲೂಕಿನಲ್ಲಿರುವ ವಿವಿಧ ಮಠಗಳು ಸೇರಿದಂತೆ ಕೊಕ್ಕನೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ಇನ್ನಿತರೆ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.

error: Content is protected !!