2 ತಿಂಗಳು ಉಚಿತ ಪಡಿತರ ಪ್ರಧಾನಿಗಳಿಂದ ದಿಟ್ಟ ಹೆಜ್ಜೆ

ಸಂಸದ ಜಿ.ಎಂ.ಸಿದ್ದೇಶ್ವರ

ದಾವಣಗೆರೆ, ಏ. 25- ಕೋವಿಡ್ ಎರಡನೇ ಅಲೆಯಿಂದ ಬಾಧಿತರಾಗಿರುವ ದೇಶವಾಸಿಗಳ ಕ್ಷೇಮವನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶದ ಒಟ್ಟು 80 ಕೋಟಿ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್ ಯೋಜನೆಯಡಿ  ಮೇ ಮತ್ತು ಜೂನ್ ಈ ಎರಡು ತಿಂಗಳು ಉಚಿತವಾಗಿ 5 ಕೆ.ಜಿ. ಪಡಿತರ ನೀಡುವ ಮಹತ್ತರ ನಿರ್ಧಾರವನ್ನು ಮಾನ್ಯ ಪ್ರಧಾನಮಂತ್ರಿಗಳು ತೆಗೆದುಕೊಂಡಿದ್ದು, ಇದರ ಸದುಪಯೋಗವನ್ನು ನನ್ನ ಲೋಕಸಭಾ ಕ್ಷೇತ್ರದ ಜನತೆ ಪಡೆದುಕೊಳ್ಳಲು ಸಂಸದ ಸಿದ್ದೇಶ್ವರ್ ತಿಳಿಸಿದ್ದಾರೆ.

ಕಳೆದ ವರ್ಷ ಕೋವಿಡ್ ಸಂಕಷ್ಟದ ಕಾಲದಲ್ಲಿ ತಗೆದುಕೊಂಡಂತೆಯೇ ಈ ಬಾರಿಯೂ ಉಚಿತ ಪಡಿತರ ನೀಡುವ ನಿರ್ಧಾರವನ್ನು  ಪ್ರಧಾನಿಗಳು ತಗೆದುಕೊಂಡಿದ್ದು, ಇದಕ್ಕಾಗಿ ಸರ್ಕಾರ ಸುಮಾರು 26 ಸಾವಿರ ಕೋಟಿಯಷ್ಟು ಹಣ ವ್ಯಯಿಸಲಿದೆ.  

error: Content is protected !!