ಭರಮಸಾಗರದಲ್ಲಿ ಪ್ರವಚನ ಕಾರ್ಯಕ್ರಮ

ಭರಮಸಾಗರದಲ್ಲಿ ಪ್ರವಚನ ಕಾರ್ಯಕ್ರಮ - Janathavaniಭರಮಸಾಗರ, ಫೆ.24- ಪತ್ರಕರ್ತ ಬಿ.ಜೆ. ಅನಂತಪದ್ಮನಾಭ ರಾವ್ ಅವರ ಮನೆಯಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರವಚನಕಾರ ಹುಬ್ಬಳ್ಳಿಯ ಹರಿಚಾರ್ ವಾಳ್ವೇಕರ್ ಅವರು ಮಹಾಭಾರತದ ವನಪರ್ವ ಪ್ರಸಂಗವನ್ನು ತಿಳಿಸಿಕೊಟ್ಟರು.

ಅರ್ಜುನನ ಬಳಿ ಇದ್ದ ವಿಶೇಷ ಅಸ್ತ್ರ-ಶಸ್ತ್ರಗಳ ಕುರಿತಾದ ಪ್ರಸಂಗ, ಪಾಂಡವರು ವಿಶಾಲ ಬದರಿಗೆ ತೆರಳಿದ ಪ್ರಸಂಗ, ಘಟೋತ್ಕಜನ ಭೇಟಿ, ಸೌಗಂ ಧಿಕಾ ವನಕ್ಕೆ ಕರೆದೊಯ್ದ ಪ್ರಸಂಗಗಳನ್ನು ವಾಳ್ವೇ ಕರ್ ಕೇಳುಗರ ಮನ ಮುಟ್ಟುವಂತೆ ವಿವರಿಸಿದರು.  ಈ ಸಂದರ್ಭದಲ್ಲಿ ಜಯಮ್ಮ ಜಯರಾವ್, ಬೆಂಗಳೂರಿನ ಮಾಲತಿ ವಿಠಲ್, ಚಿತ್ರದುರ್ಗದ ಪರಿಮಳ ಶ್ಯಾಂ ಸುಂದರ್ ಸುರಭಿ ಇನ್ನಿತರರಿದ್ದರು.

error: Content is protected !!