ಹೊನ್ನಾಳಿ : ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

 ಹೊನ್ನಾಳಿ,ಫೆ.23 – ಸಣ್ಣ ಹಿಡುವಳಿ ಪ್ರಮಾಣ ಪತ್ರಕ್ಕೆ ರೈತನಿಂದ ಲಂಚ ಅಪೇಕ್ಷಿಸಿದ ಗ್ರಾಮ ಲೆಕ್ಕಾಧಿಕಾರಿಯನ್ನು ಎಸಿಬಿ ಪೊಲೀಸರು ಬಂಧಿಸಿರುವ ಘಟನೆ ಇಂದು ನಡೆದಿದೆ.

ಎಚ್. ಗೋಪಗೊಂಡನಹಳ್ಳಿ – ಬಳ್ಳೇಶ್ವರ ಗ್ರಾಮ ಲೆಕ್ಕಾಧಿ ಕಾರಿ ಚೆಲುವರಾಜು ಲಂಚ ಸ್ವೀಕರಿಸಿರುವ ವ್ಯಕ್ತಿಯಾಗಿದ್ದು, ಬಳ್ಳೇಶ್ವರ ಗ್ರಾಮದ ರೈತ ರತ್ನಾಕರ ದೂರುದಾರರಾಗಿದ್ದಾರೆ.

ಒಂದೂವರೆ ತಿಂಗಳಿನಿಂದ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರಕ್ಕೆ ಗ್ರಾಮ ಲೆಕ್ಕಾಧಿಕಾರಿ ಚೆಲುವರಾಜುಗೆ ಅರ್ಜಿ ಸಲ್ಲಿಸಿದ್ದರು ಪ್ರಮಾಣಪತ್ರ ನೀಡಿರಲಿಲ್ಲ. ಇದಕ್ಕಾಗಿ 1,500 ರೂ.ಗಳಷ್ಟು ಲಂಚ ಅಪೇಕ್ಷಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಪಟ್ಟಣದ ಕುರಿ ಸಂತೆ ಮೈದಾನದ ಬಳಿ ಇರುವ ಗ್ರಾಮ ಲೆಕ್ಕಾಧಿಕಾರಿ ಚೆಲುವರಾಜುನ ಖಾಸಗಿ ರೂಮಿನಲ್ಲಿ ರೈತ ರತ್ನಾಕರ ಲಂಚದ ಹಣ ನೀಡುತ್ತಿದ್ದಂತೆ ದಾಳಿ ನಡೆಸಿದ ಎಸಿಬಿ ಡಿವೈಎಸ್ಪಿ ಸುಧೀರ್, ಇನ್ಸ್‍ಪೆಕ್ಟರ್ ಮಧುಸೂಧನ್ ಹಣದ ಸಮೇತ ಚೆಲುವರಾಜುನನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

error: Content is protected !!