ನಗರದ ಪ್ರಮುಖ ಮಾರ್ಗಗಳಿಗೆ ಸಾಧಕರ ಹೆಸರಿಡಲು ಒತ್ತಾಯ

ದಾವಣಗೆರೆ, ಏ.22- ನಗರದ ಪ್ರಮುಖ ಮಾರ್ಗಗಳಿಗೆ (ರಸ್ತೆಗಳಿಗೆ) ಸಾಧಕರ ಹೆಸರುಗಳನ್ನಿಡುವಂತೆ ಜಿಲ್ಲಾ ಸಮಾಚಾರ ಬಳಗದ ಪದಾಧಿಕಾರಿಗಳು ಮಹಾನಗರ ಪಾಲಿಕೆಯ ಮಹಾಪೌರರನ್ನು ಒತ್ತಾಯಿಸಿದ್ದಾರೆ.

ನಗರದ ಯಾವುದಾದರೊಂದು ಮಾರ್ಗ (ರಸ್ತೆ) ಕ್ಕೆ ಖ್ಯಾತ ಲೇಖಕಿ ದಿ. ಟಿ. ಗಿರಿಜ ಅವರ ಹೆಸರನ್ನು, ಅಂಬೇಡ್ಕರ್‌ ವೃತ್ತದಿಂದ ಮೋದಿ ಕ್ಯಾಂಪಿನವರೆಗಿನ ರಸ್ತೆಗೆ ಪದ್ಮಶ್ರೀ ದಿ. ಚಿಂದೋಡಿ ಲೀಲಾ ಅವರ ಹೆಸರಿಡುವಂತೆ ಮೇಯರ್‌ ಎಸ್‌.ಟಿ ವೀರೇಶ್‌ ಹಾಗೂ ಆಯುಕ್ತ ವಿಶ್ವನಾಥ್‌ ಪಿ. ಮುದಜ್ಜಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಳಗದ ಪದಾಧಿಕಾರಿಗಳಾದ ವಿ. ಹನುಮಂತಪ್ಪ, ಡಾ. ಸಿ.ಕೆ ಆನಂದತೀರ್ಥಚಾರ್‌, ಸಾಲಿಗ್ರಾಮ ಗಣೇಶ್‌ ಶೆಣೈ, ಕೆ.ಎನ್‌ ಜಯಪ್ರಕಾಶ್, ಭಾರತಿ, ಎನ್‌.ಟಿ ಎರಿಸ್ವಾಮಿ, ಶ್ರೀಕುಮಾರ್‌ ಆನೆ ಕೊಂಡ, ಬಸವರಾಜ ಐರಣಿ, ಕೆ. ರಾಘವೇಂದ್ರ ನಾಯರಿ ಉಪಸ್ಥಿತರಿದ್ದರು.

error: Content is protected !!