ಹಳೇ ಕುಂದುವಾಡ ಶ್ರೀಕ್ಷೇತ್ರದಲ್ಲಿ ಹೋಮ, ಪೂಜಾ ಕೈಂಕರ್ಯಗಳು

ಹಳೇ ಕುಂದುವಾಡ ಶ್ರೀಕ್ಷೇತ್ರದಲ್ಲಿ ಹೋಮ, ಪೂಜಾ ಕೈಂಕರ್ಯಗಳು - Janathavaniದಾವಣಗೆರೆ, ಜು.10- ಇಲ್ಲಿಗೆ ಸಮೀಪದ ಹಳೇ ಕುಂದುವಾಡ ಗ್ರಾಮ ದಲ್ಲಿನ ಸದ್ಗುರು ಶ್ರೀ ಕರಿಬಸ ವೇಶ್ವರ ಸ್ವಾಮಿ ದೇವಸ್ಥಾನದಲ್ಲಿ   ಕೊರೊನಾ ಮಹಾಮಾರಿ ಬಹುಬೇಗ ತೊಲಗಲೆಂದು ಹಾಗೂ ಮನುಕುಲ ಮತ್ತು ಸಕಲ ಜೀವರಾಶಿಗಳಿಗೂ ಲೇಸುಂಟಾಗಲೆಂದು ಪ್ರಾರ್ಥಿಸಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಹೋಮ, ಪೂಜಾ ಕೈಂಕರ್ಯಗಳು ಇಂದು   ನೆರವೇರಿದವು.

ಶೃಂಗೇರಿಯ ವೇದಬ್ರಹ್ಮ ಶ್ರೀ ರವೀಂದ್ರ ಭಟ್ ಅವರ ನೇತೃತ್ವದ ಹಾಗೂ ಹಳೇ ಕುಂದವಾಡ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಪೂಜ್ಯ ಶ್ರೀ ರಾಜಣ್ಣ ಅವರ ಸಾನ್ನಿಧ್ಯದಲ್ಲಿ ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳು ನೆರವೇರಿದವು. ಪೂಜಾ ಕೈಂಕರ್ಯಗಳಲ್ಲಿ ದೇವಸ್ಥಾನದ ಪುರೋಹಿತ ವರ್ಗದವರು ಮಾತ್ರ ಭಾಗವಹಿಸಿದ್ದರು.

error: Content is protected !!