ನೂತನ ದೇವಸ್ಥಾನ ಸಂಕಲ್ಪ ಸಿದ್ಧಿ ವಿನಾಯಕ-ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ವೈಭವ

ನೂತನ ದೇವಸ್ಥಾನ ಸಂಕಲ್ಪ ಸಿದ್ಧಿ ವಿನಾಯಕ-ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ವೈಭವ - Janathavaniದಾವಣಗೆರೆ, ಫೆ.15- ಇಲ್ಲಿನ ಡಿಸಿಎಂ ಟೌನ್ ಶಿಪ್ ಸಮೀಪದ ಶಕ್ತಿ ನಗರ ಬಳಿಯ ರಾಜೇಂದ್ರ ಬಡಾವಣೆಯಲ್ಲಿ ಸಂಕಲ್ಪ ಸಿದ್ಧಿ ವಿನಾಯಕ ನಾಗರಿಕ ಸಮಿತಿ ವತಿಯಿಂದ ಶ್ರೀ ಸಂಕಲ್ಪ ಸಿದ್ಧಿ ವಿನಾಯಕ ಮತ್ತು ಶ್ರೀ ಅಭಯ ಹಸ್ತ ಆಂಜನೇಯ ಸ್ವಾಮಿ ನೂತನ ದೇವಸ್ಥಾನದಲ್ಲಿ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಇಂದು ನೆರವೇರಿತು.

ಶ್ರೀ ಸಂಕಲ್ಪ ಸಿದ್ಧಿ ವಿನಾಯಕ ಮತ್ತು ಶ್ರೀ ಅಭಯ ಹಸ್ತ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ಗಣಪತಿ ದೇವರ ಪ್ರತಿಷ್ಠಾ ಹೋಮ, ಗಣ ಹೋಮ, ಪಂಚಾಮೃತ ಅಭಿಷೇಕ, ಜೀವಕಳಶ ಪೂಜೆ, ಪ್ರಾಣ ಪ್ರತಿಷ್ಠೆ, ಕಲಶಾಭಿಷೇಕ, ಬ್ರಹ್ಮ ಕುಂಭಾಭಿಷೇಕ, ಮಹಾಪೂಜೆ ವಿಜೃಂಭಣೆಯಿಂದ ಜರುಗಿತು. ಅನ್ನಸಂತರ್ಪಣೆ ಸಹ ಏರ್ಪಡಿಸಲಾಗಿತ್ತು.  

error: Content is protected !!