ಕೊರೊನಾ : ರಂಭಾಪುರಿ ಜಗದ್ಗುರುಗಳ ಪ್ರವಾಸ ರದ್ದು

ಕೊರೊನಾ : ರಂಭಾಪುರಿ ಜಗದ್ಗುರುಗಳ ಪ್ರವಾಸ ರದ್ದು - Janathavaniರಂಭಾಪುರಿ ಪೀಠ (ಬಾಳೆಹೊನ್ನೂರು), ಏ.18- ಕೊರೊನಾ ವೈರಸ್ 2ರ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಮ್ಮ ನಿಗದಿತ ಎಲ್ಲ ಪ್ರವಾಸ ಕಾರ್ಯಕ್ರಮಗಳನ್ನು ರದ್ದುಪಡಿಸಿರುವುದಾಗಿ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಮಾಹಿತಿ ನೀಡಿದ್ದಾರೆ.

ಕೋವಿಡ್-19ರ ಪರಿಣಾಮದಿಂದಾಗಿ ಕಳೆದ ವರ್ಷ ಜನತೆ ಸಂಕಷ್ಟ ಅನುಭವಿಸಿದ್ದು, ಇನ್ನೂ ಹಸಿರಾಗಿರುವಾಗ ಈಗ ಕೊರೊನಾ ವೈರಸ್ 2ನೇ ಅಲೆಯ ಪ್ರಭಾವ ಹೆಚ್ಚಾಗುತ್ತಿರುವುದು ಆತಂಕದ ವಿಷಯ.  ಕಾರಣ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್‌ಗೆ ಒಳಪಡುವುದು ಇವುಗಳ ಜೊತೆಗೆ ಕೊರೊನಾ ಲಸಿಕೆ ಪಡೆಯಬೇಕು ಮತ್ತು ಸರ್ಕಾರ ಸೂಚಿಸುವ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ. 

error: Content is protected !!