ಆಗಸ್ಟ್‌ನಲ್ಲಿ ಕಸಾಪ ಚುನಾವಣೆ ನಡೆಸಲಿ

ದಾವಣಗೆರೆ, ಜು.6- ಕೋವಿಡ್ ಹಿನ್ನೆಲೆಯಲ್ಲಿ ಮೇ 9 ರಂದು ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಯನ್ನು ಮುಂದೂಡಲಾಗಿತ್ತು. ಇದೀಗ ಕೊರೊನಾ ತಹಬಂದಿಗೆ ಬರುತ್ತಿದ್ದು, ರಾಜ್ಯ ಚುನಾವಣಾ ಆಯೋಗವು ಕಸಾಪ ಚುನಾವಣೆಯನ್ನು ಆಗಸ್ಟ್ ಕೆೋನೆ ವಾರದಲ್ಲಿ ನಡೆಸಲು ಸೂಕ್ತ ಕ್ರಮ ಕೈಗೆೋಳ್ಳುವಂತೆ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವಕುಮಾರಸ್ವಾಮಿ ಕುರ್ಕಿ ಒತ್ತಾಯಿಸಿದ್ದಾರೆ.

ಈಗಾಗಲೇ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ನಡೆದಿದ್ದು, ಕೇವಲ ಚುನಾವಣೆ ದಿನಾಂಕ ಘೋಷಿಸುವುದು ಬಾಕಿ ಇದೆ. ಚುನಾವಣಾ ಆಯೋಗ ಶೀಘ್ರವೇ ಸೂಕ್ತ ಕ್ರಮ ಜರುಗಿಸುವಂತೆ ಕುರ್ಕಿ ಮನವಿ ಮಾಡಿದ್ದಾರೆ.

error: Content is protected !!