ರಾಣೇಬೆನ್ನೂರಿನಲ್ಲಿ ನಾಳೆ ಸಿದ್ಧಾರೂಢರ ರಥೋತ್ಸವ

ರಾಣೇಬೆನ್ನೂರು, ಫೆ.12- ಸ್ಥಳೀಯ ಶ್ರೀ ಸಿದ್ಧಾರೂಢ ಮಠದಲ್ಲಿ 21  ನೇ ವೇದಾಂತ ಪರಿಷತ್ ಹಾಗೂ 7  ನೇ ವರ್ಷದ ಶ್ರೀ ಸಿದ್ಧಾರೂಢರ ರಥೋತ್ಸವವು  ನಾಡಿದ್ದು ದಿನಾಂಕ 14 ರಿಂದ 16 ರವರೆಗೆ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಶ್ರೀ ಮಲ್ಲಯ್ಯಜ್ಜ ತಿಳಿಸಿದ್ದಾರೆ.

ಬುದ್ನಿ ಪ್ರಭಾನಂದ ಶ್ರೀಗಳು, ಹಂಪಿ ಹೇಮಕೂಟದ ವಿದ್ಯಾನಂದ ಶ್ರೀ, ಹುಬ್ಬಳ್ಳಿ ರಾಮಾನಂದ ಶ್ರೀ, ಸಚ್ಚಿದಾನಂದ ಶ್ರೀ, ಸೌಟಗಿ ಲಿಂಗಯ್ಯ ಸ್ವಾಮಿಗಳು ಪಾಲ್ಗೊಳ್ಳು ವರು. ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಪೌರಾಯುಕ್ತ ಮಹಾಂತೇಶ ಹಾಗೂ ಡಿವೈಎಸ್‌ಪಿ ಸುರೇಶ್ ಆಗಮಿಸಲಿದ್ದಾರೆ.

ಶರಣ ಜನರ ಸಹೃದಯನಳಿನದೊಳು ಪರಿಶೋಭಿಸುತ್ತಿಹುದು ನಿನ್ನ ಪಾದ,   ಸುಮ್ಮನೆ ಕಾಲವನು ಕಳೆದು ಸಾವು ದುಚಿತವೇ, ದುರಿತದೊಳಧಿಕವಾವುದು ನಿಂದರ, ಅರಿವೆ ವಿಶ್ವಾಶ್ರಯವೆಂದನು ಕರಿಪನೆ ಜಾಣರದೇವ, ಉದ್ದರೇದಾ ತ್ಮನಾತ್ಮಾನಂ. ವಿಷಯಗಳ ಕುರಿತಂತೆ ಶ್ರೀಗಳು ಉಪದೇಶ ನೀಡಲಿದ್ದು, ಮಲ್ಲಯ್ಯಜ್ಜ ಸಾನ್ನಿಧ್ಯ ವಹಿಸುವರು. ಇದೇ ದಿನಾಂಕ 16 ರಂದು ಸಂಜೆ  ರಥೋತ್ಸವ ಜರುಗಲಿದೆ. 

error: Content is protected !!