ಕಾರ್ಮಿಕರ ಸುರಕ್ಷತೆಗೆ ಪ್ರಾರ್ಥನೆ

ದಾವಣಗೆರೆ, ಫೆ.9- ಉತ್ತರಾ ಖಂಡದಲ್ಲಿ ಭಾರೀ ಹಿಮಪಾತಕ್ಕೆ ಋಷಿಗಂಗಾ ಜಲವಿದ್ಯುತ್ ತಯಾ ರಿಕಾ ಘಟಕಕ್ಕೆ ತೀವ್ರ ಹಾನಿಯಾ ಗಿದ್ದು, 350 ಕ್ಕೂ ಹೆಚ್ಚು ಕಾರ್ಮಿಕರು ನೀರು ಪಾಲಾಗಿದ್ದು, ಕಾಣೆಯಾದ ಕಾರ್ಮಿಕರು ಸುರಕ್ಷಿತ ವಾಗಿರಲೆಂದು 2ನೇ ರಾಜಧಾನಿ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರದೇಶ ರೈತ ಸಂಘವು ದೇವರಲ್ಲಿ ಪ್ರಾರ್ಥಿಸಿದೆ. ಸಂಘದ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರೀ, ಚಂದ್ರಶೇಖರ ದಾನಪ್ಪ, ಕಣಸಪ್ಪಳ ಚನ್ನಬಸಪ್ಪ, ಎಂ. ಪ್ರೇಮಲತಾ, ಗೌಡರ ಎಸ್.ಪಿ. ರಾಮಚಂದ್ರಪ್ಪ, ಜಡೆ ನಾಗರಾಜ ರಾವ್, ಮಹದೇವಪ್ಪ ತಳವಾರ ಇನ್ನಿತರರು ಈ ಕುರಿತು ತಿಳಿಸಿದ್ದಾರೆ.

error: Content is protected !!