ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ: ದಾಖಲೆ ನೀಡಲು ಸೂಚನೆ

ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ: ದಾಖಲೆ ನೀಡಲು ಸೂಚನೆ - Janathavaniದಾವಣಗೆರೆ, ಫೆ.3- ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಮಹಾನಗರಪಾಲಿಕೆಯಿಂದ ಮಾಡಲಾಗುತ್ತಿದೆ. 

ಸಮೀಕ್ಷೆಗಾಗಿ ಮಹಾನಗರ ಪಾಲಿಕೆಯ ಸಿಬ್ಬಂದಿ ತಮ್ಮ ಮನೆಗಳಿಗೆ ಭೇಟಿ ನೀಡುತ್ತಿದ್ದು, ಪಾಲಿಕೆ ಸಿಬ್ಬಂದಿ ಕರ್ನಾಟಕ ಹೆಚ್‍ಟುಹೆಚ್ ಚಿಲ್ಡ್ರನ್ ಸರ್ವೇ ಮೊಬೈಲ್ ಆಪ್ ಸ್ಕ್ಯಾನ್ ಮಾಡಲು ನಿಮ್ಮ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್, ರೇಷನ್ ಕಾರ್ಡನ್ನು ಮತ್ತು 6 ರಿಂದ 14 ವರ್ಷದ ಮಕ್ಕಳಿದ್ದಲ್ಲಿ  ಮಕ್ಕಳ ಫೋಟೋ ನೀಡಿ ಸಹಕರಿಸಬೇಕೆಂದು ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ.

error: Content is protected !!