ಬಸವ ಕಲ್ಯಾಣದಲ್ಲಿ ಬೇಡ ಜಂಗಮ ಸಮಾವೇಶ

ಮಲೇಬೆನ್ನೂರು, ಫೆ.3- ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ವತಿಯಿಂದ ಬೇಡಜಂಗಮ ಜಾತಿ ಪ್ರಮಾಣ ಪತ್ರಕ್ಕಾಗಿ ಬಿ.ಡಿ. ಹಿರೇಮಠರವರ ನೇತೃತ್ವದಲ್ಲಿ ಇದೇ ದಿನಾಂಕ 7 ರಂದು ಬೆಳಿಗ್ಗೆ 11 ಗಂಟೆಗೆ  ಬೀದರ್ ಜಿಲ್ಲೆಯ ಬಸವ ಕಲ್ಯಾಣದ ಥೇರ ಮೈದಾನ ಸಭಾ ಭವನದಲ್ಲಿ  ಬೇಡ ಜಂಗಮರ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಬೇಡ ಜಂಗಮರ ಸಂವಿಧಾನ ಬದ್ಧ ಹಕ್ಕೊತ್ತಾಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಜಂಗಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೈ ಜೋಡಿಸಲು ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಕಾರ್ಯದರ್ಶಿ ನಂದಿಗಾವಿ ತಿಪ್ಪೇಸ್ವಾಮಿ-9448233997, ತಾಲ್ಲೂಕು ಸಂಚಾಲಕ ಬಿ.ಎಂ. ಹಾಲಸ್ವಾಮಿ- 9448814413, ಬಿ.ಎಂ. ಜಗದೀಶ್ವರ ಸ್ವಾಮಿ-9448102682 ಹಾಗೂ ಉಮೇಶ್ ಮಠದ್- 7019426890 ಸಂಪರ್ಕಿಸಲು ಒಕ್ಕೂಟ ತಿಳಿಸಿದೆ.

error: Content is protected !!