ಚಿತ್ರದುರ್ಗದಲ್ಲಿ ನಾಳೆ ರಾಜ್ಯ ಮಟ್ಟದ ಸವಿತಾ ಸಮಾಜದ ಮೀಸಲಾತಿ ಚಿಂತಾನಾ ಸಭೆ

ಚಿತ್ರದುರ್ಗದಲ್ಲಿ ನಾಳೆ ರಾಜ್ಯ ಮಟ್ಟದ ಸವಿತಾ ಸಮಾಜದ ಮೀಸಲಾತಿ ಚಿಂತಾನಾ ಸಭೆ - Janathavaniಚಿತ್ರದುರ್ಗ, ಜ.17 – ಸವಿತಾ ಸಮಾಜದ ಮೀಸಲಾತಿಗೆ ಸಂಬಂಧಿಸಿದಂತೆ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿ ಸಲು ರಾಜ್ಯ ಮಟ್ಟದ ಮೀಸಲಾತಿ ಚಿಂತನಾ ಸಭೆಯನ್ನು ನಾಡಿದ್ದು ದಿನಾಂಕ 19ರ ಮಂಗಳವಾರ ಬೆಳಿಗ್ಗೆ 10-30ಕ್ಕೆ ಇಲ್ಲಿನ ಶ್ರೀ ಕಬೀರಾನಂದ ಮಠದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಚಿಂತನಾ ಸಭೆಯ ಸಾನಿಧ್ಯವನ್ನು ಶ್ರೀ ಸವಿತಾ ಪೀಠದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ವಹಿಸಲಿದ್ದಾರೆ.  

ಕಾರ್ಯಕ್ರಮವು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯ ಎನ್.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಜರುಗಲಿದೆ. ಈ ಬಗ್ಗೆ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್ ಹಾಗೂ ಮೀಸಲಾತಿ ಹೋರಾಟ ಸಮಿತಿ ಸಂಚಾಲಕ ಟಿ.ತಿಪ್ಪೇಸ್ವಾಮಿ ಸಂಪಿಗೆ ತಿಳಿಸಿದ್ದಾರೆ. 

ಸವಿತಾ ಸಮಾಜದ ಬಹು ವರ್ಷಗಳ ಬೇಡಿಕೆಯಾದ ಮೀಸಲಾತಿ ಬಗ್ಗೆ, ಪ್ರಸ್ತುತ ಸಮಾಜ 2ಎ ನಲ್ಲಿರುವ ಮೀಸಲಾತಿಯ ಸಾಧಕ ಬಾದಕಗಳು, ಸಮಾಜಕ್ಕೆ ಯಾವ ರೀತಿಯ ಮೀಸಲಾತಿ ಅಗತ್ಯ ಇದೆ.  ಮೀಸಲಾತಿಗಾಗಿ ಕೈಗೊಳ್ಳುವ ಹೋರಾಟಗಳ ಬಗ್ಗೆ ಚರ್ಚೆ ನಡೆಯಲಿದೆ. 

ಸಭೆಯಲ್ಲಿ ಸವಿತಾ ಸಮಾಜದ ಹೆಸರಿನಲ್ಲಿ ಗುರುತಿಸಿರುವ ಎಲ್ಲಾ ಉಪಜಾತಿಗಳ ಉಪ ಪಂಗಡಗಳ ಪ್ರತಿನಿಧಿಗಳು,  ಪದಾಧಿಕಾರಿಗಳು, ಸಮಾಜದ ಮುಖಂಡರು, ಬುದ್ಧಿಜೀವಿಗಳು ಭಾಗವಹಿಸಲಿದ್ದಾರೆ.  

ನಗರಸಭಾ ಮಾಜಿ ಸದಸ್ಯ ಗ.ನ. ಲಿಂಗರಾಜು, ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷ ಹಾಗೂ ವಕೀಲರಾದ ಜಿ.ಜಿ.ಸಾಯಿನಾಥ್,  ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಖಜಾಂಚಿ ಹನುಮಂತಪ್ಪ ಮದಕರಿಪುರ, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ಮುಖಂಡರಾದ ಪಲ್ಲವಿ ಪ್ರಸನ್ನ ಅವರುಗಳು ಮನವಿ ಮಾಡಿದ್ದಾರೆ.

error: Content is protected !!