ಬಿಜೆಪಿಯದ್ದು ಪಾಪದ ಸರ್ಕಾರ: ಸಿದ್ದರಾಮಯ್ಯ

ದಾವಣಗೆರೆ, ಜ.15- ಬಿಜೆಪಿಯದ್ದು ಪಾಪದ ಸರ್ಕಾರ. ಅಕ್ರಮವಾಗಿ ರಚನೆಯಾಗಿರುವ ಸರ್ಕಾರ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಭ್ರಷ್ಟಾಚಾರಗಳು ಒಂದೊಂದಾಗಿ ಹೊರ ಬರುತ್ತಿವೆ ಎಂದರು.

ಇದೀಗ ಸಿಡಿ ಬಗ್ಗೆ ಚರ್ಚೆಯಾಗುತ್ತಿದೆ. ಬಿಜೆಪಿಯವರೇ ಬ್ಲಾಕ್ ಮೇಲ್ ಗಿರಾಕಿಗಳು. ಸಿಡಿಯಲ್ಲಿ ಕೆಟ್ಟದಾಗಿ ಇದೆ ಎಂದು ಹೇಳುತ್ತಾರೆ. ಅದೇನಿದೆ ಎಂಬುದು ತನಿಖೆಯಿಂದ ಹೊರ ಬರಲಿ. ಸಿಡಿ ಬಿಡುಗಡೆಗೆ ಹೆಚ್.ವಿಶ್ವನಾಥ್ ಇಂದು ನಾಳೆ ಎನ್ನುತ್ತಿದ್ದಾರೆ. ಮೀನಾಮೇಷ  ಮಾಡಬಾರದು ಎಂದರು.

ಕನಕ ಗುರು ಪೀಠದ ಸ್ವಾಮೀಜಿಯ ಪಾದಯಾತ್ರೆ ಬಗ್ಗೆ ಮಾತನಾಡಿದ ಸಿದ್ಧರಾಮಯ್ಯ, ನಾನು ಎಸ್.ಟಿ. ವಿರೋಧಿಯಲ್ಲ ಎಂದರು.

ಮಾಜಿ ಸಚಿವರಾದ ಶಾಮನೂರು ಮಲ್ಲಿಕಾರ್ಜುನ್, ಪಿ.ಟಿ. ಪರಮೇಶ್ವರನಾಯ್ಕ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ಜಿ.ಪಂ. ಸದಸ್ಯ ಕೆ.ಎಸ್. ಬಸವರಾಜ್ , ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ್ ಜಾಧವ್ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!