ಬಿಜೆಪಿ ಯುವ ಮೋರ್ಚಾದಿಂದ ವಿವೇಕಾನಂದ ಜಯಂತಿ

ದಾವಣಗೆರೆ, ಜ.15- ಜಿಲ್ಲಾ ಯುವ ಮೋರ್ಚಾದಿಂದ ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನಾಚರಣೆ ಆಚರಿಸಲಾಯಿತು.

ಮೋರ್ಚಾ ಅಧ್ಯಕ್ಷ ಆರ್.ಎಲ್. ಶಿವಪ್ರಕಾಶ್ ವಿವೇಕಾನಂದರ ಆದರ್ಶ ಮತ್ತು ತತ್ವಗಳನ್ನು ತಿಳಿಸಿದರು. ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಲ್ಲೇಶ್ ವಿವೇಕಾನಂದರ ಕುರಿತು ಮಾತನಾಡಿದರು. 

ಈ ಸಂದರ್ಭದಲ್ಲಿ ರಾಕೇಶ್, ಸಚಿನ್, ಕಿಶೋರ್, ಚಂದ್ರು, ನಾಗರಾಜ ಅಂಗಡಿ, ಹರೀಶ್, ರಾಕೇಶ್, ಭಜರಂಗಿ, ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ರಾಕೇಶ್, ಉತ್ತರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ವೆರ್ಣೇಕರ್ ಮತ್ತು ಶಶಿಕುಮಾರ್ ಉಪಸ್ಥಿತರಿದ್ದರು.

error: Content is protected !!