ಸರ್ವೋಚ್ಛ ನ್ಯಾಯಾಲಯದ ತೀರ್ಪು ನಿರಾಶಾದಾಯಕ

ದಾವಣಗೆರೆ, ಜ.15- ಮೂರು ಕರಾಳ ಕೃಷಿ ಕಾಯಿದೆಗಳ ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಕಾಯಿದೆಯ ವಾಪಸಾತಿಗಾಗಿ ದೇಶದ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪು ಸಂಪೂರ್ಣ ನಿರಾಶಾದಾಯಕ ಹಾಗೂ ಈ ಹೋರಾಟಕ್ಕೆ ಮಾರಕವಾಗಿದೆ ಎಂದು ಎಸ್‌ಯುಸಿಐ(ಸಿ) ಹೇಳಿದೆ.

 ತಮ್ಮ ಹೋರಾಟವನ್ನು ಮುಂದುವರೆಸುವ ರೈತರ ತೀರ್ಮಾನಕ್ಕೆ ನಮ್ಮ ಬೆಂಬಲ ವ್ಯಕ್ತಪಡಿಸುತ್ತಾ, ಕೇಂದ್ರ ಬಿಜೆಪಿ ಸರ್ಕಾರದ ಕಾರ್ಪೊರೇಟ್‌ ಸೇವೆಗೈಯ್ಯುವ ನೀತಿಗಳನ್ನು ಸೋಲಿಸಲು ದೇಶದ ಮಿಲಿಯಾಂತರ ಶೋಷಿತ ಜನತೆ ಮುಂದಾಗಬೇಕೆಂದು ಎಸ್‌.ಯು.ಸಿ.ಐ ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಸಮಿತಿಯು ಕರೆ  ನೀಡುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ತಿಳಿಸಿದ್ದಾರೆ.

error: Content is protected !!