ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ

ಕೂಡ್ಲಿಗಿ, ಜ.15- ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮ ಯೋಜನೆ ಹಾಗೂ ಸಾಸಲವಾಡ ಕೆರೆ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ `ನಮ್ಮ ಊರು, ನಮ್ಮ ಕೆರೆ’ ಕಾರ್ಯಕ್ರಮದಡಿ ಸಾಸಲವಾಡ ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಲಾಯಿತು.

ತಹಶೀಲ್ದಾರ್ ಎಸ್. ಮಹಾಬಲೇಶ್ವರ್ ಕಾಮಗಾರಿ ಉದ್ಘಾಟಿಸಿ ಮಾತನಾಡಿ, ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದರು. ಸಮಿತಿ ಅಧ್ಯಕ್ಷ ಕೆ.ಹೆಚ್.ಎಂ. ಶಿವಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. 

ತಾ.ಪಂ. ಸದಸ್ಯ ಬಣಕಾರ ಚಿನ್ನಪ್ಪ, ಸಂಸ್ಥೆ ಪ್ರಾದೇಶಿಕ ಯೋಜನಾಧಿಕಾರಿ ಪಿ.ಕೆ. ಪುರುಷೋತ್ತಮ, ನಿರ್ದೇಶಕ ಚಿದಾನಂದ, ಸ್ಥಳೀಯ ಯೋಜನಾಧಿಕಾರಿ ಮಂಜುನಾಥ್, ಮೇಲ್ವಿಚಾರಕಿ ಜಯಲಕ್ಷ್ಮಿ, ಪ್ರತಿನಿಧಿಗಳಾದ ಜ್ಯೋತಿ, ರಾಜಶೇಖರ್, ಕೃಷಿ ಮೇಲ್ವಿಚಾರಕ ರಮೇಶ್ ಪೂಜಾರಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!