ಜೋಯಿಸರಹರಳಹಳ್ಳಿಯಲ್ಲಿ ದೇವಸ್ಥಾನಕ್ಕೆ ಕಳಸಾರೋಹಣ

ಜೋಯಿಸರಹರಳಹಳ್ಳಿಯಲ್ಲಿ ದೇವಸ್ಥಾನಕ್ಕೆ ಕಳಸಾರೋಹಣ - Janathavaniರಾಣೇಬೆನ್ನೂರು, ಜ.5-  ತಾಲ್ಲೂಕಿನ  ಜೋಯಿಸರ ಹರಳಹಳ್ಳಿ ಗ್ರಾಮದ ಶ್ರೀ ಗುರುಶಾಂತೇಶ್ವರ ಹಾಗೂ ಶ್ರೀ ಮಳಿಶಾಂತೇಶ್ವರ ಸ್ವಾಮಿಗಳ ದೇವಸ್ಥಾನದ ಕಳಸಾರೋಹಣ ಸಮಾರಂಭ ನಿನ್ನೆ ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿತು. ಗ್ರಾಮದ ಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀಗಳು ಜಗತ್ತಿನಾದ್ಯಂತ ಜನ ಕೊರೊನಾ ಪಿಡುಗಿನಿಂದ ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಲಕ್ಷಾಂತರ ದುಡ್ಡು ಖರ್ಚು ಮಾಡಿ ಇಂತಹ ಧಾರ್ಮಿಕ ಕಾರ್ಯಕ್ರಮ ಮಾಡಿರುವುದು ರೋಗದ ವಿರುದ್ಧ ಹೋರಾಟ ನಡೆಸಿದ ಭಾವನೆಯಾಗಿದೆ ಎಂದು ನುಡಿದರು.

ಧಾರ್ಮಿಕ ಸಭೆ, ಸಮಾರಂಭಗಳ ಮೂಲಕ ಈ ಗ್ರಾಮದ ಜನತೆ ಶಾಂತಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳುವರು ಎಂದು ರಟ್ಟಿಹಳ್ಳಿ ಕಬ್ಬಿಣ ಕಂತಿಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿ ಉಪದೇಶಿಸಿದರು.

ಅಕ್ಕಿಆಲೂರಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಉಪದೇಶಾಮೃತ ನೀಡಿದರು. ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ,  ಆರ್. ಪಿ. ಹೊಟ್ಟಿಗೌಡ್ರ, ಸೋಮಶೇಖರ ಸಾರದ, ಶಿವಕುಮಾರ ಮುದ್ದಪ್ಪಳರ ಇನ್ನಿತರರು ಪಾಲ್ಗೊಂಡಿದ್ದರು.

error: Content is protected !!