ಯುವಕರನ್ನು ಕುಡುಕರನ್ನಾಗಿ ಮಾಡಲು ಹೊರಟ ಬಿಜೆಪಿ ಸರ್ಕಾರ

ಯುವಕರನ್ನು ಕುಡುಕರನ್ನಾಗಿ ಮಾಡಲು ಹೊರಟ ಬಿಜೆಪಿ ಸರ್ಕಾರ - Janathavaniಹರಪನಹಳ್ಳಿ, ಜ. 17- ರಾಜ್ಯ ಬಿಜೆಪಿ ಯುವಕರನ್ನು ಕುಡುಕರನ್ನಾಗಿ ಮಾಡಲು ಹೊರಟಿದೆ ಎಂದು ಹರಪನಹಳ್ಳಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಶಿಧರ್ ಪೂಜಾರ್ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಮಾಹಿತಿ ನೀಡಿದ ಅವರು, ಮುಖ್ಯಮಂತ್ರಿಗಳು ಮದ್ಯಪಾನ ಮಾಡುವವರ ವಯಸ್ಸಿನ ಮಿತಿಯನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿದ್ದಾರೆ. ರಾಮ ರಾಜ್ಯದ ಹೆಸರಿನ ಮೇಲೆ ಅಧಿಕಾರ ಹಿಡಿದ ಬಿಜೆಪಿ ಪಕ್ಷ, ಇವತ್ತು ಯುವಕರನ್ನು ಕುಡುಕರನ್ನಾಗಿ ಮಾಡಲು ಹೊರಟಿದೆ. ಇದನ್ನು ರಾಮರಾಜ್ಯ ಎನ್ನಬೇಕೋ ಅಥವಾ ಮದ್ಯಪಾನ ರಾಜ್ಯ ಎನ್ನಬೇಕೋ ತಿಳಿಯದಾಗಿದೆ ಎಂದರು. ಈಗಾಗಲೇ ರಾಜ್ಯ, ದೇಶದಲ್ಲಿ ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದೆ. ಹೀಗಿರುವಾಗ ಜಾತಿ, ಜಾತಿಗಳ ನಡುವೆ ಗಲಭೆಗಳನ್ನು ಸೃಷ್ಠಿ ಮಾಡುತ್ತಿರುವ ಈ ಬಿಜೆಪಿ ಸರ್ಕಾರ ಯುವಕರನ್ನು ಇನ್ನೂ ಹೆಚ್ಚು ತಪ್ಪುದಾರಿಗೆ ತರುವ ವ್ಯವಸ್ಥಿತವಾದ ಹುನ್ನಾರ ಮಾಡುತ್ತಿದೆ. ಮದ್ಯಪಾನ ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಸರ್ಕಾರ ಟಾರ್ಗೆಟ್ ಕೊಡುತ್ತಿದೆ. ಹಾಗಾದರೆ ಹೆಚ್ಚು ಕುಡುಕರು ಆಗಲಿ ಎನ್ನುವುದು ಈ ಬಿಜೆಪಿ ಸರ್ಕಾರದ ಉದ್ದೇಶನಾ ಎಂಬುದು ತಿಳಿಯದಾಗಿದೆ. ಸರ್ಕಾರದ ಈ ಧೋರಣೆಯನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ

error: Content is protected !!