ಹೊಸಪೇಟೆಯಲ್ಲೇ ವಿಜಯನಗರ ಜಿಲ್ಲಾ ವಕ್ಫ್ ಕಛೇರಿ ಪ್ರಾರಂಭಿಸಲು ಒತ್ತಾಯ

ಹೊಸಪೇಟೆಯಲ್ಲೇ ವಿಜಯನಗರ ಜಿಲ್ಲಾ ವಕ್ಫ್ ಕಛೇರಿ ಪ್ರಾರಂಭಿಸಲು ಒತ್ತಾಯ - Janathavaniಹರಪನಹಳ್ಳಿ, ಜ. 17- ನೂತನ ವಿಜಯನಗರ ಜಿಲ್ಲೆಯ ಜಿಲ್ಲಾ ವಕ್ಫ್ ಅಧಿಕಾರಿಗಳ ಕಛೇರಿಯನ್ನು ಹೊಸಪೇಟೆ ಕೇಂದ್ರ ಸ್ಥಾನದಲ್ಲಿಯೇ ಪ್ರಾರಂಭಿಸುವಂತೆ ಪುರಸಭೆ ಸದಸ್ಯ ಜಾಕೀರ್ ಹುಸೇನ್ ಸರ್ಖಾವಾಸ್ ಮನವಿ ಮಾಡಿದ್ದಾರೆ.

ವಿಜಯನಗರ ಜಿಲ್ಲೆಯ ಜಿಲ್ಲಾ ವಕ್ಫ್ ಕಛೇರಿಯು ಹೊಸಪೇಟೆ ಕೇಂದ್ರ ಸ್ಥಾನ ಬಿಟ್ಟು ಕಮಲಾಪುರದಲ್ಲಿ ಆರಂಭ ಮಾಡ ಲಾಗುತ್ತಿದೆ ಎಂಬ ಮಾಹಿತಿಯು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. ಹೊಸಪೇಟೆ ನಗರ ಹೊರತುಪಡಿಸಿ ಬೇರೆ ಯಾವುದೇ ಕಡೆ ಜಿಲ್ಲಾ ವಕ್ಫ್ ಕಛೇರಿಯನ್ನು ಆರಂಭಿಸಿದರೆ ಸುತ್ತಮುತ್ತಲಿನ ತಾಲ್ಲೂಕಿನ ಸಾರ್ವಜನಿಕರ ಕೆಲಸಗಳಿಗೆ ತುಂಬಾ ಅನಾನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

error: Content is protected !!