ಶಾ, ಮೋದಿ ಜಾದೂ ನಡೆಯಲ್ಲ

ಶಾ, ಮೋದಿ ಜಾದೂ ನಡೆಯಲ್ಲ - Janathavaniದಾವಣಗೆರೆ, ಡಿ.30 – ಅಮಿತ್ ಶಾ, ನರೇಂದ್ರ ಮೋದಿಯವರ ಜಾದೂ ಇಲ್ಲೇನೂ ನಡೆಯಲ್ಲ. ಎಷ್ಟು ಬಾರಿ ಬಂದರೂ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು, ಇಂದು ನಗರಕ್ಕಾಗಮಿಸಿದಾಗ ಸುದ್ದಿಗಾರರೊಂದಿಗೆ ಮಾತ ನಾಡಿ, ಅಮಿತ್ ಶಾ ಬಳಿಯೇನು ಮಂತ್ರ ದಂಡ ಇದೆಯೇ. ಇಲ್ಲಿ ಬಂದು ಮಾಯಾ ಮಂತ್ರ ಮಾಡುತ್ತಾರಾ. ನರೇಂದ್ರ ಮೋದಿಯವರೇ ಬಂದರೂ ಇಲ್ಲಿ ಬಿಜೆಪಿ ಗೆಲ್ಲಲ್ಲ ಎಂದರು. ಕೇಂದ್ರ ಮಂತ್ರಿ ಅಂತ ಕರೆದಿರುವುದರಿಂದ ಬಂದಿದ್ದಾರೆ ಅಷ್ಟೇ. ಅವರು ಬಂದಾಕ್ಷಣ ಗೆದ್ದು ಬಿಡ್ತಾರಾ. ಚುನಾವಣಾ ಸಂದರ್ಭದಲ್ಲಿ ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶದಲ್ಲಿಯೇ ಠಿಕಾಣಿ ಹಾಕಿದ್ದರು ಏನಾಯಿತು ಎಂದು ವ್ಯಂಗ್ಯವಾಡಿದರು. ಈ ವೇಳೆ ಸಿದ್ದರಾಮಯ್ಯನವರು ಹೆಲೆಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ಚಾಮುಂಡೇಶ್ವರಿ ತಾಯಿ ಸುಪುತ್ರ , ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಬುದಾಗಿ ಘೋಷಣೆಗಳನ್ನು ಕೂಗುವ ಮೂಲಕ ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳು ಅವರನ್ನು ಸಂಭ್ರಮದಿಂದ ಸ್ವಾಗತಿಸಿದರು.

error: Content is protected !!