ದಾವಣಗೆರೆ, ಜ. 9 – ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ನಾಡಿದ್ದು ದಿನಾಂಕ 11ರ ಗುರುವಾರ ಎಳ್ಳು ಅಮಾವಾಸ್ಯೆ ಪ್ರಯುಕ್ತ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಪಾದಗಳಿಗೆ ಬೆಳಿಗ್ಗೆ ವಿಶೇಷ ಪೂಜೆ, ನಂತರ ಬೆಳಿಗ್ಗೆ 8 ರಿಂದ ಭಕ್ತಾದಿಗಳಿಗೆ ಪ್ರಸಾದ ದಾಸೋಹ ನಡೆಯಲಿದೆ. ಭಕ್ತಾದಿಗಳು ಆಗಮಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ. ದಾಸೋಹ ಮನೆ, ಸಭಾಂಗಣ ಕಟ್ಟಡವು ಪ್ರಗತಿ ಹಂತದಲ್ಲಿದೆ. ಭಕ್ತಾದಿಗಳು ದೇಣಿಗೆ ಸಲ್ಲಿಸಲು ಕೋರಿದೆ ಎಂದು ದೇವಸ್ಥಾನ ಸಮಿತಿಯ ಕಣಕುಪ್ಪಿ ಮುರುಗೇಶಪ್ಪ (96118 89151) ತಿಳಿಸಿದ್ದಾರೆ.
ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಮಠದಲ್ಲಿ ನಾಳೆ ಅಮಾವಾಸ್ಯೆ ಪೂಜೆ
![koodi camp ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಮಠದಲ್ಲಿ ನಾಳೆ ಅಮಾವಾಸ್ಯೆ ಪೂಜೆ](https://janathavani.com/wp-content/uploads/2024/01/koodi-camp.jpg)