ಕನಕ ಬ್ಯಾಂಕ್ ಅಧ್ಯಕ್ಷರಾಗಿ ಕೆ. ಪರಶುರಾಮ್

ಕನಕ ಬ್ಯಾಂಕ್ ಅಧ್ಯಕ್ಷರಾಗಿ ಕೆ. ಪರಶುರಾಮ್ - Janathavaniದಾವಣಗೆರೆ, ಡಿ.20- ನಗರದ ಕನಕ ಪಟ್ಟಣ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೆ. ಪರಶುರಾಮ್ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಕೆ.ಪಿ. ಶ್ವೇತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬ್ಯಾಂಕಿನ ಆಡಳಿತ ಮಂಡಳಿಗೆ ಕಳೆದ ವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕ
ಮಂಡಳಿಯು ಬ್ಯಾಂಕಿನ ಸಭಾಂಗಣ ದಲ್ಲಿ ನಿನ್ನೆ ಸೇರಿದ್ದ ಸಭೆಯಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾ ಯಿತು. ನಿರ್ದೇಶಕರುಗಳಾದ ಕೆ.ಆರ್. ಭರಮಪ್ಪ, ಬಿ. ದಿಳ್ಳೆಪ್ಪ, ಹೆಚ್.ಎಂ. ಗೋಣೆಪ್ಪ, ಪಿ.ಲಕ್ಕಪ್ಪ, ಎಸ್.ಹೆಚ್. ಕಾಂತೇಶ್ ಶ್ರೀಮತಿ ಗೀತಾ ಬಿ. ಮಾಲತೇಶಪ್ಪ, ಹೆಚ್.ಸಿ. ಗಣೇಶ್, ವೀರಭದ್ರಪ್ಪ (ಜರೇಶ್), ಟಿ.ಎನ್. ಪ್ರಕಾಶ್ ಮ್ತು ಜಿ.ಎಸ್. ಹನುಮಂತ ಅವರುಗಳು ಸಭೆಯ ಕಾರ್ಯಕಲಾಪದಲ್ಲಿ ಪಾಲ್ಗೊಂಡಿದ್ದರು.

ಸಹಕಾರ ಸಂಘಗಳ ಇಲಾಖೆಯ ಸಹಾಯಕ ನಿಬಂಧಕರಾದ ಮಂಜುಳಾ ಅವರು ಚುನಾವಣೆಯನ್ನು ನಡೆಸಿಕೊಟ್ಟರು. ಬ್ಯಾಂಕಿನ ವ್ಯವಸ್ಥಾಪಕ ಬಿ.ಎಲ್. ಗೌಡ, ಲೆಕ್ಕಾಧಿಕಾರಿ ರಮೇಶ್ ದೇವಜ್ಜಿ ಅವರುಗಳು ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.

error: Content is protected !!