ಶಾಮನೂರಿನ ಶ್ರೀ ಕಟ್ಟೆ ದುರ್ಗಾಂಬಿಕ ದೇವಿ ಸೇವಾ ಸಮಿತಿಯಿಂದ ಶ್ರೀ ಕಟ್ಟೆ ದುರ್ಗಾಂಬಿಕ ದೇವಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವು ಇಂದು ಜರುಗಲಿದೆ.
ಬೆಳಿಗ್ಗೆ 4.50 ರಿಂದ 8.50ರ ವರೆಗೆ ಸಲ್ಲುವ ಬ್ರಾಹ್ಮೀ ಮುಹೂರ್ತದಲ್ಲಿ ದೇವಿಗೆ ಗಂಗಾಪೂಜೆ, ಗಣಪತಿ ಪೂಜೆ, ದೇವಿಗೆ ರುದ್ರಾಭಿಷೇಕ ಹಾಗೂ ವಸ್ತ್ರಾಲಂಕಾರ, ಪುಷ್ಪಾಲಂಕಾರ ನೆರವೇರುವುದು.
ನಂತರ ಬೆಳಿಗ್ಗೆ 10.50 ರಿಂದ ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿಯವರಿಂದ ದೇವಿಗೆ ಕಳಸಾರೋಹಣ ನೆರವೇರುವುದು. ಮಧ್ಯಾಹ್ನ 12 ಗಂಟೆಯಿಂದ ಅನ್ನ ಸಂತರ್ಪಣೆ ನಡೆಯುವುದು.