ನಗರದಲ್ಲಿ ಇಂದು ಸಹಕಾರಿಗಳಿಂದ ನೂತನ ಸಚಿವರು, ಶಾಸಕರಿಗೆ ಅಭಿನಂದನೆ

ದಾವಣಗೆರೆ, ಆ. 12- ಜಿಲ್ಲಾ ಸಹಕಾರಿ ಗಳಿಂದ ನೂತನ ಸಚಿವರು ಮತ್ತು ಶಾಸಕರು  ಗಳಿಗೆ ನಾಳೆ ದಿನಾಂಕ 13 ರಂದು ಭಾನುವಾರ ಬೆಳಿಗ್ಗೆ 11.30 ಕ್ಕೆ ಬಾಪೂಜಿ ಬ್ಯಾಂಕ್ ಸಮು ದಾಯ ಭವನದಲ್ಲಿ ಅಭಿನಂದನಾ ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ  ಜೆ.ಆರ್. ಷಣ್ಮುಖಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಹಕಾರ ಸಚಿವ ಕೆ.ಎನ್. ರಾಜಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜೆ.ಆರ್. ಷಣ್ಮುಖಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. 

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಿ.ಜಿ. ಶಾಂತನಗೌಡ, ಬಿ. ದೇವೇಂದ್ರಪ್ಪ, ಕೆ.ಎಸ್. ಬಸವಂತಪ್ಪ, ಬಿ.ಪಿ. ಹರೀಶ್, ಬಸವರಾಜ್ ಶಿವಗಂಗಾ ಅವರನ್ನು ಅಭಿನಂದಿಸಲಾಗುವುದು.

ಮುಖ್ಯ ಅತಿಥಿಗಳಾಗಿ ಎನ್.ಜಿ. ಪುಟ್ಟಸ್ವಾಮಿ, ಸಿರಿಗೆರೆ ರಾಜಣ್ಣ, ಜಗದೀಶಪ್ಪ ಬಣಕಾರ್, ಜೆ.ಎಸ್. ವೇಣುಗೋಪಾಲ ರೆಡ್ಡಿ, ಬೆಳ್ಳೂಡಿ ರಾಮಚಂದ್ರಪ್ಪ, ಬಿ. ಹಾಲೇಶಪ್ಪ,  ಹೆಚ್.ಕೆ. ಬಸಪ್ಪ,  ಆರ್.ಎಂ. ರವಿ, ಬಿ. ಶೇಖರಪ್ಪ, ಜಿ.ಡಿ. ಗುರುಸ್ವಾಮಿ, ಬೇತೂರು ರಾಜಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಹಕಾರಿಗಳಾದ ಎನ್.ಜಿ. ಪುಟ್ಟಸ್ವಾಮಿ, ಸಿರಿಗೆರೆ ರಾಜಣ್ಣ, ಬಿ. ಹಾಲೇಶಪ್ಪ, ಜಿ.ಡಿ. ಗುರುಸ್ವಾಮಿ, ಬಿ. ಶೇಖ ರಪ್ಪ, ಬೇತೂರು ಟಿ. ರಾಜಣ್ಣ, ಬಿ. ಉಮೇಶ ಕುಮಾರ್, ಕೆ.ಹೆಚ್. ಷಣ್ಮುಖಪ್ಪ, ಮುರಿಗೇಂ ದ್ರಯ್ಯ, ಕೆ.ಜಿ. ಸುರೇಶ, ಭೂಮೇಶ್ವರಪ್ಪ, ವೈ. ಲೋಕೇಶ್ ಮತ್ತಿತರರಿದ್ದರು.

error: Content is protected !!