ಭರಮಸಾಗರ, ಆ. 12- ಹಲಸಿನ ಹಣ್ಣು ಮಾರಾಟ ಮಾಡುವಲ್ಲಿ ಹೆಸರುವಾಸಿಯಾಗಿದ್ದ ಗಂಗಮ್ಮ, ಹೆಚ್. ರಂಗಪ್ಪನವರ ಪುತ್ರಿ ರತ್ನಮ್ಮ ಜಯಪ್ಪ ಅವರು ಭರಮಸಾಗರ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ, ಉಪಾಧ್ಯಕ್ಷರಾಗಿ ಕೋಡಿರಂಗವ್ವನಹಳ್ಳಿಯ ಜ್ಯೋತಿ ರುದ್ರಮುನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗ್ರಾಮ ಪಂಚಾಯಿತಿಯಲ್ಲಿ 26 ಸದಸ್ಯರಿದ್ದು, ಈ ಸಾರಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಅದರ ಪ್ರಕಾರ ಚುನಾವಣೆ ನಡೆಸಿ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆಯನ್ನು ಅಧಿಕಾರಿ ಟಿ.ಆರ್. ಶಶಿಕಲಾ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಕೋಡಿ ರಂಗವ್ವನಹಳ್ಳಿ ಹನುಮಂತಪ್ಪ, ಕೆಟಿಸಿ ಮಂಜುನಾಥ್, ಶಮೀನ್ ಪಾಷಾ, ಸಿ.ಟಿ. ಮಹಾಂತೇಶ್, ಎಸ್.ಎಂ.ಎಲ್. ಪ್ರವೀಣ್, ಟಿ.ಆರ್. ಚನ್ನೇಶ, ಶಿವಣ್ಣ, ಬುಡನ್ ಸಾಬ್, ಅಲ್ಲಾಬಕ್ಷಿ, ಪರ್ವಿನ್, ಶ್ರೀಧರ್, ಹರೀಶ, ಗೌಡರ ರಾಜಣ್ಣ, ರವಿನಾಯಕ್, ರುದ್ರೇಶ್, ನಿರ್ಮಲ, ಮಂಜುಳಮ್ಮ, ಇಬ್ರಾಹಿಂ ಮತ್ತಿತರರಿದ್ದರು.
ಭರಮಸಾಗರ ಗ್ರಾ.ಪಂ. ಅಧ್ಯಕ್ಷರಾಗಿ ರತ್ನಮ್ಮ ಆಯ್ಕೆ
![04 bharamasagara 13.08.2023 ಭರಮಸಾಗರ ಗ್ರಾ.ಪಂ. ಅಧ್ಯಕ್ಷರಾಗಿ ರತ್ನಮ್ಮ ಆಯ್ಕೆ](https://janathavani.com/wp-content/uploads/2023/08/04-bharamasagara-13.08.2023.jpg)