ಭರಮಸಾಗರ ಗ್ರಾ.ಪಂ. ಅಧ್ಯಕ್ಷರಾಗಿ ರತ್ನಮ್ಮ ಆಯ್ಕೆ

ಭರಮಸಾಗರ ಗ್ರಾ.ಪಂ. ಅಧ್ಯಕ್ಷರಾಗಿ ರತ್ನಮ್ಮ ಆಯ್ಕೆ

ಭರಮಸಾಗರ, ಆ. 12- ಹಲಸಿನ ಹಣ್ಣು ಮಾರಾಟ ಮಾಡುವಲ್ಲಿ ಹೆಸರುವಾಸಿಯಾಗಿದ್ದ ಗಂಗಮ್ಮ, ಹೆಚ್. ರಂಗಪ್ಪನವರ ಪುತ್ರಿ ರತ್ನಮ್ಮ ಜಯಪ್ಪ ಅವರು ಭರಮಸಾಗರ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ, ಉಪಾಧ್ಯಕ್ಷರಾಗಿ ಕೋಡಿರಂಗವ್ವನಹಳ್ಳಿಯ ಜ್ಯೋತಿ ರುದ್ರಮುನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗ್ರಾಮ ಪಂಚಾಯಿತಿಯಲ್ಲಿ 26 ಸದಸ್ಯರಿದ್ದು, ಈ ಸಾರಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಅದರ ಪ್ರಕಾರ ಚುನಾವಣೆ ನಡೆಸಿ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆಯನ್ನು ಅಧಿಕಾರಿ ಟಿ.ಆರ್. ಶಶಿಕಲಾ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಕೋಡಿ ರಂಗವ್ವನಹಳ್ಳಿ ಹನುಮಂತಪ್ಪ, ಕೆಟಿಸಿ ಮಂಜುನಾಥ್, ಶಮೀನ್ ಪಾಷಾ, ಸಿ.ಟಿ. ಮಹಾಂತೇಶ್, ಎಸ್.ಎಂ.ಎಲ್. ಪ್ರವೀಣ್, ಟಿ.ಆರ್. ಚನ್ನೇಶ, ಶಿವಣ್ಣ, ಬುಡನ್ ಸಾಬ್, ಅಲ್ಲಾಬಕ್ಷಿ, ಪರ್ವಿನ್, ಶ್ರೀಧರ್, ಹರೀಶ, ಗೌಡರ ರಾಜಣ್ಣ, ರವಿನಾಯಕ್, ರುದ್ರೇಶ್, ನಿರ್ಮಲ, ಮಂಜುಳಮ್ಮ, ಇಬ್ರಾಹಿಂ ಮತ್ತಿತರರಿದ್ದರು.  

error: Content is protected !!