ನಾಳೆ ಸುನಂದ ದುರುಗೇಶ್ ಅವರ `ನೆನಪು ನಿರಂತರ’ ಕಾರ್ಯಕ್ರಮ

ನಾಳೆ ಸುನಂದ ದುರುಗೇಶ್ ಅವರ `ನೆನಪು ನಿರಂತರ’ ಕಾರ್ಯಕ್ರಮ

ದಾವಣಗೆರೆ, ಆ. 4- ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿದ್ದ ವಿಚಾರವಾದಿ, ಆಂದೋಲನಗಾರ್ತಿ ಶ್ರೀಮತಿ ಸುನಂದ ದುರುಗೇಶ್ ಅವರ `ನೆನಪು ನಿರಂತರ’ ಕಾರ್ಯಕ್ರಮವು ನಾಡಿದ್ದು ದಿನಾಂಕ 6 ರಂದು ಬೆಳಿಗ್ಗೆ 10.30 ಕ್ಕೆ ನಗರದ ಕೆ.ಇ.ಬಿ. ಸಮುದಾಯ ಭವನದಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಕನ್ನಡ ಚಳವಳಿ ಹೋರಾಟಗಾರ ನಾಗೇಂದ್ರ ಬಂಡೀಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ವಿಶ್ರಾಂತ ಮುಖ್ಯ ನ್ಯಾಯಾಧೀಶರಾದ ಎಲ್. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ, ಮಾಜಿ ಸಚಿವ ಹೆಚ್. ಆಂಜನೇಯ, ಚಿತ್ರದುರ್ಗ ನವಯಾನ ಬುದ್ಧ ದಮ್ಮ ಉಪಾಸಕ ಪ್ರೊ.ಸಿ.ಕೆ.ಮಹೇಶ್ವರಪ್ಪ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಕೀಲರೂ, ಸುನಂದ ಅವರ ಪತಿ ದುರುಗೇಶ್ ಗುಡಿಗೇರಿ, ಸಹೋದರ ನಾಗೇಂದ್ರ ಹಾವೇರಿ, ವಕೀಲರಾದ ಕೆ.ಜಿ.ಕೆ. ಸ್ವಾಮಿ, ಮಹಾವೀರ ಜೈನ್ ಸಂಘವಿ, ಹೆಚ್.ಎನ್. ಸುಧಾ, ಹುಲಿಗೇಶ್, ಮಂಜುನಾಥ್ ಉಪಸ್ಥಿತರಿದ್ದರು. 

error: Content is protected !!