ನಗರದಲ್ಲಿ ನಾಳೆ ಏಕರೂಪ ನಾಗರಿಕ ಸಂಹಿತೆ ಸಂವಾದ

ದಾವಣಗೆರೆ, ಆ.3- ನಗರದ ರೋಟರಿ ಭಾನಭವನದಲ್ಲಿ ನಾಡಿದ್ದು ದಿನಾಂಕ 5 ರ ಶನಿವಾರ ಸಂಜೆ 5 ಗಂಟೆಗೆ `ಏಕರೂಪ ನಾಗರಿಕ ಸಂಹಿತೆ’ ಸಂವಾದ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಹಿರಿಯ ವಕೀಲ, ಅಧಿವಕ್ತಾ ಪರಿಷತ್‌ನ ಜಿಲ್ಲಾ ಅಧ್ಯಕ್ಷರಾದ ಎಲ್‌. ದಯಾನಂದ್‌ ವಹಿಸುವರು. ಕಾರ್ಯಕ್ರಮವನ್ನು ಆರ್‌.ಎಲ್‌. ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್‌. ಯತೀಶ್‌ ಉದ್ಘಾಟಿಸುವರು. ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ವಕೀಲರು, ಅಧಿವಕ್ತಾ ಪರಿಷತ್‌ನ ಕಾರ್ಯದರ್ಶಿಗಳಾದ ಲಕ್ಷ್ಮಿನಾರಾಯಣ ಎನ್‌.ಹೆಗಡೆ ಆಗಮಿಸುವರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರುಗಳಾದ ಡಿ.ಎನ್‌. ಬಸವರಾಜ್‌,   ಮಂಜುನಾಥ ದೊಡ್ಡಮನಿ ಉಪಸ್ಥಿತರಿರುವರು.

error: Content is protected !!