ಹರಿಹರ : ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ

ಹರಿಹರ,  ಆ.1- ಇಂದು ಒಂದೇ ದಿನದಲ್ಲಿ ಹರಿಹರ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಹಲವಾರು ಶಿಕ್ಷಕರು ನಿವೃತ್ತಿಯ ಹೊಂದಿದ್ದು, ಅದರಲ್ಲಿ ತಾಲ್ಲೂಕು ಹಿರಿಯ ಶಿಕ್ಷಕರಾದ ಮಲ್ಲಿಕಾರ್ಜುನ ಅಂಗಡಿ, ಬಡ್ತಿ ಮುಖ್ಯೋಪಾಧ್ಯಾಯರು ಜಿ ಎಚ್‌ಪಿಎಸ್ ಸಲಗನಹಳ್ಳಿ, ಸಿದ್ದಲಿಂಗಪ್ಪ ಬಡ್ತಿ ಮುಖ್ಯೋಪಾಧ್ಯಾಯರು. ಜಿಎ ಚ್‌ಪಿ ಎಸ್ ಹೊಳೆ ಸಿರಿಗೆರೆ, ಚಂದ್ರಾಚಾರಿ ಬಡ್ತಿ ಮುಖ್ಯೋಪಾಧ್ಯಾಯರು ಜಿಎಚ್‌ಪಿ ಎಸ್ ಕೆ. ಬೇವಿನಹಳ್ಳಿ. ನಜೀರ್ ಅಹ್ಮದ್. ದೈಹಿಕ ಶಿಕ್ಷಕರು, ಹಳೆ ಹರ್ಲಾಪುರ, ಹರಿಹರ ಶ್ರೀಮತಿ ಶಾರದಮ್ಮ ಮೇಡಂ ಬಡ್ತಿ ಮುಖ್ಯೋಪಾಧ್ಯಾಯರು, ಜಿಎಚ್ಪ್, ಪಿ.ಎಸ್ ಗುಳದಹಳ್ಳಿ, ತಿಪ್ಪೇಸ್ವಾಮಿ ಬಡ್ತಿ ಮುಖ್ಯೋಪಾಧ್ಯಾಯರು ಜಿಹೆಚ್ ಪಿ. ಎಸ್. ಕೆಂಚನಹಳ್ಳಿ, ತಿಪ್ಪಾ ಜೋಯಿಸ್ ದೈಹಿಕ ಶಿಕ್ಷಕರು ಸಾರಥಿ ಇವರುಗಳ ನಿವೃತ್ತಿ ಹೊಂದಿದ್ದು ಬಿಇಓ ಹನುಮಂತಪ್ಪ ಅವರು ಎಲ್ಲರಿಗೂ ಸನ್ಮಾನಿಸಿ, ಗೌರವಿಸಿ ಬೀಳ್ಕೊಟ್ಟರು. 

error: Content is protected !!