ರಂಗಪಯಣ (ಬೆಂಗಳೂರು) ಅಭಿನಯಿಸುತ್ತಿರುವ `ನಾಟಕದೊಳ್ ಕರ್ನಾಟಕ’ ಕಾರ್ಯಕ್ರಮದಲ್ಲಿ ದಾವಣಗೆರೆಯ ವಿನಾಯಕ ಎಂ. ಬೊಂಗಾಳೆ ಅಭಿನಯಿಸುತ್ತಿರುವ `55 ನಿಮಿಷದ ಒಂದು ಪ್ರೇಮಕಥೆ’ ನಾಟಕವು ಇಂದು ಸಂಜೆ 7 ಗಂಟೆಗೆ ನಗರದ ಪದ್ಮಶ್ರೀ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ ಅಭಿನಯಗೊಳ್ಳಲಿದೆ. ಪ್ರವೇಶ ಉಚಿತವಾಗಿದೆ.
ನಾಟಕದ ರಚನೆ, ಸಂಗೀತ, ನಿರ್ದೇಶನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ ಉಸ್ತಾದ್ ಬಿಸ್ಮಿಲ್ಲಾ ಖಾನ್ ಪ್ರಶಸ್ತಿ ಪುರಸ್ಕೃತ ರಾಜ್ಗುರು ನಿರ್ವಹಿಸಿರುವರು.
ಕಾರ್ಯಕ್ರಮವು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯ್ಯಪ್ಪ ಹಾಗೂ ನಾವು-ನೀವು ಕಲಾತಂಡದ ಸಹಕಾರದಲ್ಲಿ ನಡೆಯಲಿದೆ.