ಚಿತ್ರದುರ್ಗ, ಜು. 27 – ನಗರದ ವಿದ್ಯಾವಿಕಾಸ ಪ್ರೌಢಶಾಲೆಯ ವಿದ್ಯಾರ್ಥಿ 2023ರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ 125 ಅಂಕ ಗಳಿಸಿದ ಕೆ.ಪಿ ವರುಣ್ ಅವರನ್ನು ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಕನ್ನಡ ಕೌಸ್ತುಭ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವರುಣ್ ಅವರು ಡಯಟ್ ಉಪನ್ಯಾಸಕ ಕೆ.ಜಿ. ಪ್ರಶಾಂತ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಮಂಜುಳಾ ದಂಪತಿ ಪುತ್ರ.
ಕೆ.ಪಿ. ವರುಣ್ಗೆ ಕನ್ನಡ ಕಲಾ ಕೌಸ್ತುಭ ಪ್ರಶಸ್ತಿ
![26 varun 28.07.2023 ಕೆ.ಪಿ. ವರುಣ್ಗೆ ಕನ್ನಡ ಕಲಾ ಕೌಸ್ತುಭ ಪ್ರಶಸ್ತಿ](https://janathavani.com/wp-content/uploads/2023/07/26-varun-28.07.2023-.jpg)